<p><strong>ಹಾಸನ: </strong>‘ಜೀತ ವಿಮುಕ್ತ ಪರಿಶಿಷ್ಟ ಜಾತಿಯವರ ಹಿಡುವಳಿ ಜಮೀನನ್ನು ಕಿತ್ತುಕೊಂಡು ಮಿಲಿಟರಿ ಕ್ಯಾಂಪ್ಗೆ ಮಂಜೂರು<br />ಮಾಡಿಸಲು ಮುಂದಾಗಿರುವ ಸಕಲೇಶಪುರ ತಹಶೀಲ್ದಾರ್ ಮಂಜುನಾಥ್ ಮತ್ತು ಮಿಲಿಟರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಜೀತ ವಿಮುಕ್ತಿ ಕರ್ನಾಟಕ ಕೃಷಿ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.</p>.<p>‘ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದ ಸರ್ವೆ ನಂ. 330 ರಲ್ಲಿ ಕಾಳಯ್ಯ ಬಿನ್ ಕೆಂಚಯ್ಯ ಎಂಬ ಜೀತ ವಿಮುಕ್ತರಿಗೆ 1976ರಲ್ಲಿ 3 ಎಕರೆ ಮಂಜೂರಾಗಿ ಸಾಗುವಳಿ ಚೀಟಿ, ಒಎಂ ದಾಖಲಾತಿ ಹಾಗೂ ಪಹಣಿಯಲ್ಲೂ ನಮೂದಾಗಿದೆ. ಈ ಜಮೀನು ಬಸವನಹಳ್ಳಿ ಮಿಲಿಟರಿ ಕ್ಯಾಂಪ್ಗೆ ಹೊಂದಿಕೊಂಡಂತೆ ಇರುವುದರಿಂದ ನಾವು ಬೆಳೆದಿದ್ದ ಬಾಳೆ, ಸಿಲ್ವರ್ ಗಿಡಗಳನ್ನು ಪ್ರತಿ ಬಾರಿಯೂ ಕಿತ್ತು ಹಾಕಿ ಮಿಲಿಟರಿಯವರು ತೊಂದರೆ ಕೊಡುತ್ತಲೇ ಬಂದಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.</p>.<p>‘ತಹಶೀಲ್ದಾರ್ ಅವರು ಮಿಲಿಟರಿ ಅಧಿಕಾರಿಗಳನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿ, ಜಮೀನಿಗೆ ಹೋಗಲು ಬಿಡುತ್ತಿಲ್ಲ. ಸ್ವಂತ ಜಮೀನಿನಲ್ಲಿ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ. ಸರ್ಕಾರಕ್ಕೆ ಈ ಜಮೀನನ್ನು ಬರೆದು ಕೊಡಿ ಎಂಬ ಬೆದರಿಕೆ ಹಾಕುತ್ತಿದ್ದಾರೆ’ ಎಂದು ದೂರಿದರು.</p>.<p>‘ಜೀತ ವಿಮುಕ್ತ ಕುಟುಂಬದವರಿಗೆ ವಾಸಿಸಲು ಸ್ವಂತ ಮನೆಯಿಲ್ಲದೆ ಮತ್ತೊಬ್ಬರ ಜಮೀನಿನಲ್ಲಿ ವಾಸಿಸುವಂತಾಗಿದೆ.<br />ಆದ್ದರಿಂದ ಜಿಲ್ಲಾಧಿಕಾರಿ ಆದೇಶದಂತೆ ಮಳಲಿ ಗ್ರಾಮ ಸರ್ವೆ ನಂ. 330ರ ಜಮೀನನ್ನು ಬಿಟ್ಟು ಉಳಿದ ಬಸವನಹಳ್ಳಿ<br />ಜಾಗವನ್ನು ಮಿಲಿಟರಿ ಕ್ಯಾಂಪ್ಗೆ ಮಂಜೂರು ಮಾಡಬೇಕು. 1976 ರಿಂದಲೂ ತೊಂದರೆ ನೀಡುತ್ತಿರುವ ಮಿಲಿಟರಿ<br />ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು’ ಎಂದು<br />ಸಂತ್ರಸ್ತರಾದ ಹರೀಶ್, ದೇವರಾಜು, ಗಂಗಮ್ಮ, ಶಾರದಮ್ಮ ಆಗ್ರಹಿಸಿದರು.</p>.<p>ಬೆಳಗೋಡು ಹೋಬಳಿ ಮೂಗಲಿ (ಶಿಡಿಗಳಲೆ) ಗ್ರಾಮದ ಜೀತ ವಿಮುಕ್ತರಿಗೆ ಬದಲಿ ಭೂಮಿ ನೀಡಬೇಕು. ಹೆಬ್ಬನಹಳ್ಳಿ<br />ಗ್ರಾಮದ ಸರ್ವೆ ನಂ.30 ರ ಜಮೀನನ್ನು ಜೀತ ವಿಮುಕ್ತರಿಗೆ ಖಾತೆ ಮಾಡದೆ ಹೇಮಾವತಿ ಜಲಾಶಯ ಯೋಜನೆಯ<br />ಮುಳುಗಡೆ ಸಂತ್ರಸ್ತರಿಗೆ ಮಂಜೂರು ಮಾಡಿರುವುದು ಸರಿಯಲ್ಲ. ಒಂದೇ ಜಮೀನನ್ನು ಇಬ್ಬರಿಗೆ ಸಾಗುವಳಿ ನೀಡಿರುವ<br />ತಹಶೀಲ್ದಾರ್ ಅವರ ಕ್ರಮ ಖಂಡನೀಯ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ<br />ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.</p>.<p>ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾ ಸಂಚಾಲಕ ಬೈರಪ್ಪ, ಮಳಲಿ ಗ್ರಾಮದ ಹರೀಶ್, ದೇವರಾಜ್, ಗಂಗಮ್ಮ, ಶಾರದಾ ಇದ್ದರು.<br /><br /><strong>ವೈಯಕ್ತಿಕ ದ್ವೇಷದಿಂದ ಆರೋಪ</strong><br />‘ಮಳಲಿ ಗ್ರಾಮದ ಈ ವಿಷಯದ ಬಗ್ಗೆ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಜೀತ ವಿಮುಕ್ತ ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಸಮಸ್ಯೆ ಆಗಿದ್ದರೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಬಗೆಹರಿಸಿಕೊಳ್ಳಬಹುದಿತ್ತು. ಮಳಲಿ ಗ್ರಾಮದ ಸರ್ವೆ ನಂ. 330ರ 3 ಎಕರೆ ಜಾಗ 1974ರಲ್ಲಿಯೇ ಮಿಲಿಟರಿಗೆ ಮಂಜೂರಾಗಿದೆ. ಸಂತ್ರಸ್ತರು ದುರಸ್ತಿಗೆ ಅರ್ಜಿ ಸಲ್ಲಿಸಿದರೆ ಮತ್ತೊಮ್ಮೆ ಪರಿಶೀಲಿಸಿ, ಯಾರ ಯಾರ ಜಮೀನು ಎಲ್ಲಿದೆ ಎಂದು ಅಳತೆ ಮಾಡಿಕೊಡುತ್ತೇವೆ. ವೈಯಕ್ತಿಕ ದ್ವೇಷದಿಂದ ನನ್ನ ವಿರುದ್ಧ ಆರೋಪ ಮಾಡಿರಬಹುದು’ಎಂದು ಸಕಲೇಶಪುರ ತಹಶೀಲ್ದಾರ್ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>‘ಜೀತ ವಿಮುಕ್ತ ಪರಿಶಿಷ್ಟ ಜಾತಿಯವರ ಹಿಡುವಳಿ ಜಮೀನನ್ನು ಕಿತ್ತುಕೊಂಡು ಮಿಲಿಟರಿ ಕ್ಯಾಂಪ್ಗೆ ಮಂಜೂರು<br />ಮಾಡಿಸಲು ಮುಂದಾಗಿರುವ ಸಕಲೇಶಪುರ ತಹಶೀಲ್ದಾರ್ ಮಂಜುನಾಥ್ ಮತ್ತು ಮಿಲಿಟರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಜೀತ ವಿಮುಕ್ತಿ ಕರ್ನಾಟಕ ಕೃಷಿ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.</p>.<p>‘ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದ ಸರ್ವೆ ನಂ. 330 ರಲ್ಲಿ ಕಾಳಯ್ಯ ಬಿನ್ ಕೆಂಚಯ್ಯ ಎಂಬ ಜೀತ ವಿಮುಕ್ತರಿಗೆ 1976ರಲ್ಲಿ 3 ಎಕರೆ ಮಂಜೂರಾಗಿ ಸಾಗುವಳಿ ಚೀಟಿ, ಒಎಂ ದಾಖಲಾತಿ ಹಾಗೂ ಪಹಣಿಯಲ್ಲೂ ನಮೂದಾಗಿದೆ. ಈ ಜಮೀನು ಬಸವನಹಳ್ಳಿ ಮಿಲಿಟರಿ ಕ್ಯಾಂಪ್ಗೆ ಹೊಂದಿಕೊಂಡಂತೆ ಇರುವುದರಿಂದ ನಾವು ಬೆಳೆದಿದ್ದ ಬಾಳೆ, ಸಿಲ್ವರ್ ಗಿಡಗಳನ್ನು ಪ್ರತಿ ಬಾರಿಯೂ ಕಿತ್ತು ಹಾಕಿ ಮಿಲಿಟರಿಯವರು ತೊಂದರೆ ಕೊಡುತ್ತಲೇ ಬಂದಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.</p>.<p>‘ತಹಶೀಲ್ದಾರ್ ಅವರು ಮಿಲಿಟರಿ ಅಧಿಕಾರಿಗಳನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿ, ಜಮೀನಿಗೆ ಹೋಗಲು ಬಿಡುತ್ತಿಲ್ಲ. ಸ್ವಂತ ಜಮೀನಿನಲ್ಲಿ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ. ಸರ್ಕಾರಕ್ಕೆ ಈ ಜಮೀನನ್ನು ಬರೆದು ಕೊಡಿ ಎಂಬ ಬೆದರಿಕೆ ಹಾಕುತ್ತಿದ್ದಾರೆ’ ಎಂದು ದೂರಿದರು.</p>.<p>‘ಜೀತ ವಿಮುಕ್ತ ಕುಟುಂಬದವರಿಗೆ ವಾಸಿಸಲು ಸ್ವಂತ ಮನೆಯಿಲ್ಲದೆ ಮತ್ತೊಬ್ಬರ ಜಮೀನಿನಲ್ಲಿ ವಾಸಿಸುವಂತಾಗಿದೆ.<br />ಆದ್ದರಿಂದ ಜಿಲ್ಲಾಧಿಕಾರಿ ಆದೇಶದಂತೆ ಮಳಲಿ ಗ್ರಾಮ ಸರ್ವೆ ನಂ. 330ರ ಜಮೀನನ್ನು ಬಿಟ್ಟು ಉಳಿದ ಬಸವನಹಳ್ಳಿ<br />ಜಾಗವನ್ನು ಮಿಲಿಟರಿ ಕ್ಯಾಂಪ್ಗೆ ಮಂಜೂರು ಮಾಡಬೇಕು. 1976 ರಿಂದಲೂ ತೊಂದರೆ ನೀಡುತ್ತಿರುವ ಮಿಲಿಟರಿ<br />ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು’ ಎಂದು<br />ಸಂತ್ರಸ್ತರಾದ ಹರೀಶ್, ದೇವರಾಜು, ಗಂಗಮ್ಮ, ಶಾರದಮ್ಮ ಆಗ್ರಹಿಸಿದರು.</p>.<p>ಬೆಳಗೋಡು ಹೋಬಳಿ ಮೂಗಲಿ (ಶಿಡಿಗಳಲೆ) ಗ್ರಾಮದ ಜೀತ ವಿಮುಕ್ತರಿಗೆ ಬದಲಿ ಭೂಮಿ ನೀಡಬೇಕು. ಹೆಬ್ಬನಹಳ್ಳಿ<br />ಗ್ರಾಮದ ಸರ್ವೆ ನಂ.30 ರ ಜಮೀನನ್ನು ಜೀತ ವಿಮುಕ್ತರಿಗೆ ಖಾತೆ ಮಾಡದೆ ಹೇಮಾವತಿ ಜಲಾಶಯ ಯೋಜನೆಯ<br />ಮುಳುಗಡೆ ಸಂತ್ರಸ್ತರಿಗೆ ಮಂಜೂರು ಮಾಡಿರುವುದು ಸರಿಯಲ್ಲ. ಒಂದೇ ಜಮೀನನ್ನು ಇಬ್ಬರಿಗೆ ಸಾಗುವಳಿ ನೀಡಿರುವ<br />ತಹಶೀಲ್ದಾರ್ ಅವರ ಕ್ರಮ ಖಂಡನೀಯ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ<br />ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.</p>.<p>ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾ ಸಂಚಾಲಕ ಬೈರಪ್ಪ, ಮಳಲಿ ಗ್ರಾಮದ ಹರೀಶ್, ದೇವರಾಜ್, ಗಂಗಮ್ಮ, ಶಾರದಾ ಇದ್ದರು.<br /><br /><strong>ವೈಯಕ್ತಿಕ ದ್ವೇಷದಿಂದ ಆರೋಪ</strong><br />‘ಮಳಲಿ ಗ್ರಾಮದ ಈ ವಿಷಯದ ಬಗ್ಗೆ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಜೀತ ವಿಮುಕ್ತ ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಸಮಸ್ಯೆ ಆಗಿದ್ದರೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಬಗೆಹರಿಸಿಕೊಳ್ಳಬಹುದಿತ್ತು. ಮಳಲಿ ಗ್ರಾಮದ ಸರ್ವೆ ನಂ. 330ರ 3 ಎಕರೆ ಜಾಗ 1974ರಲ್ಲಿಯೇ ಮಿಲಿಟರಿಗೆ ಮಂಜೂರಾಗಿದೆ. ಸಂತ್ರಸ್ತರು ದುರಸ್ತಿಗೆ ಅರ್ಜಿ ಸಲ್ಲಿಸಿದರೆ ಮತ್ತೊಮ್ಮೆ ಪರಿಶೀಲಿಸಿ, ಯಾರ ಯಾರ ಜಮೀನು ಎಲ್ಲಿದೆ ಎಂದು ಅಳತೆ ಮಾಡಿಕೊಡುತ್ತೇವೆ. ವೈಯಕ್ತಿಕ ದ್ವೇಷದಿಂದ ನನ್ನ ವಿರುದ್ಧ ಆರೋಪ ಮಾಡಿರಬಹುದು’ಎಂದು ಸಕಲೇಶಪುರ ತಹಶೀಲ್ದಾರ್ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>