ಹಳೇಬೀಡು ಸಮೀಪದ ಸಿದ್ದಾಪುರ ಗ್ರಾಮದ ಮುಂಭಾಗದಲ್ಲಿಯೇ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಅಸಮರ್ಪಕವಾಗಿದೆ.
ಹಳೇಬೀಡು ಸಮೀಪದ ಪುಷ್ಪಗಿರಿ ಬೆಟ್ಟದ ತಿರುವಿನಲ್ಲಿ ಪೈಪ್ಲೈನ್ಗೆ ತೆಗೆದ ಗುಂಡಿ ಮುಚ್ಚದೇ ಓಡಾಟಕ್ಕೆ ತೊಂದರೆಯಾಗಿದೆ.
ಹಳೇಬೀಡು ಸಮೀಪದ ಸಿದ್ದಾಪುರದಲ್ಲಿ ಬಂಡೆಕಲ್ಲುಗಳನ್ನು ಕೊರೆಯದೇ ಹಾಕುತ್ತಿರುವ ಪೈಪ್ ಲೈನ್.
ಬಂಡೆ ಕೊರೆಯದೇ ಭೂಮಿಯ ಮೇಲೆ ಅಳವಡಿಸುತ್ತಿರುವ ಪೈಪ್ಲೈನ್ ಮಣ್ಣು ಸರಿಯಾಗಿ ಮುಚ್ಚದೇ ವಾಹನ ಸಂಚಾರಕ್ಕೆ ತೊಡಕು ಅಪಪೂರ್ಣ ಕಾಮಗಾರಿಯಿಂದ ಪುಷ್ಪಗಿರಿ ಕ್ಷೇತ್ರಕ್ಕೆ ತೆರಳಲು ತೊಂದರೆ

ಸಿದ್ದಾಪುರದಲ್ಲಿ ಜೆಜೆಎಂ ಪೈಪ್ಲೈನ್ ತೆರವು ಮಾಡಿ ಹೊಸದಾಗಿ ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಗುತ್ತಿಗೆದಾರರ ಮೇಸ್ತ್ರಿ ಕಾಮಗಾರಿ ಮುಂದುವರಿಸಿದ್ದರೆ ಕ್ರಮ ಕೈಗೊಳ್ಳುತ್ತೇವೆ.
ರಂಜಿತಾ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಎಇಇ
ಪೈಪ್ಲೈನ್ ಕಾಮಗಾರಿಯ ಅವ್ಯವಸ್ಥೆ ನೋಡಿದರೆ ಮನೆ ನಲ್ಲಿಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಮನೆ ನಲ್ಲಿಗಳ ಕೆಲಸದಲ್ಲಿಯೂ ಗುಣಮಟ್ಟ ಕಾಣುತ್ತಿಲ್ಲ.
ಜಿ.ಎನ್.ರಾಜಶೇಖರ್ ಸಿದ್ದಾಪುರ ಗ್ರಾಮಸ್ಥ‘ಕಾಮಗಾರಿಗೆ ಒಪ್ಪಿಗೆ ಸೂಚಿಸಿಲ್ಲ’
‘ಮಾರ್ಚ್ 8 ರಂದು ಸಿದ್ದಾಪುರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪರಿಶೀಲನೆ ನಡೆಸಿದ್ದೇವೆ. ಪೈಪ್ ಲೈನ್ ಆಳಕ್ಕೆ ಇಳಿಯದಿರುವುದು ಗಮನಕ್ಕೆ ಬಂತು. ಒಂದೆರೆಡು ಕಡೆ ಮಾತ್ರವಲ್ಲದೇ ಗ್ರಾಮದ ಸುತ್ತ ಸಂಪೂರ್ಣ ಪೈಪ್ಲೈನ್ ಕೆಲಸ ಸಮರ್ಪಕವಾಗಿ ನಿರ್ವಹಣೆಯಾಗಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಜಿತಾ ಹೇಳಿದ್ದಾರೆ. ‘ಕಾಮಗಾರಿ ನಿಲ್ಲಿಸಲು ಕೆಲಸಗಾರರಿಗೆ ಸೂಚಿಸಿದೆವು. ಗುತ್ತಿಗೆದಾರರ ಮೇಸ್ತ್ರಿ ಮಾತಿಗೆ ಕಿವಿಗೊಡದೇ ಯಥಾಸ್ಥಿತಿಯಲ್ಲಿ ಕೆಲಸ ಮುಂದುವರಿಸಿದ್ದಾರೆ. ಹಾಲಿ ನಡೆದಿರುವ ಅಸಮರ್ಪಕ ಕಾಮಗಾರಿಗೆ ನಮ್ಮ ಒಪ್ಪಿಗೆ ಸೂಚಿಸಿಲ್ಲ’ ಎಂದು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಜಿತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.