ಮೇ 10ರೊಳಗೆ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಅಲ್ಲಗಳೆದ ಸಚಿವರು, ‘ಹೀಗೆಲ್ಲಾ ಬೀದಿಯಲ್ಲಿ ಮಾತಾಡುವುದು ಸಲ್ಲದು.ರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷ. ಈ ಪಕ್ಷದಲ್ಲಿ ಸದಸ್ಯನಾಗುವುದೇ ಒಂದು ಗೌರವ. ವರಿಷ್ಠರ ಮಾತಿಗೆ ಎಲ್ಲರೂ ಗೌರವ ಕೊಡಬೇಕು. ಅದನ್ನು ಬಿಟ್ಟು ಬೀದಿಯಲ್ಲಿ ನಿಂತು ಮಾತನಾಡಬಾರದು ಎಂದು ಕಿವಿಮಾತು ಹೇಳಿದ ಅವರು, ಯತ್ನಾಳ್ ಅವರು ಪಕ್ಷದಲ್ಲಿ ಹಿರಿಯರಿದ್ದಾರೆ. ಏನೇ ಇದ್ದರೂ ಪಕ್ಷದ ವರಿಷ್ಠರುಮಾತನಾಡಿ ಬಗೆಹರಿಸುತ್ತಾರೆ’ ಎಂದು ತಿಳಿಸಿದರು.