<p><strong>ಹಿರೀಸಾವೆ:</strong> ಹಳ್ಳಿಕಾರ್ ತಳಿ ಎತ್ತುಗಳ ಗಂಡು ಜಾತ್ರೆ ಎಂದು ರೈತಾಪಿ ಜನರಲ್ಲಿ ಪ್ರಖ್ಯಾತಿ ಹೊಂದಿರುವ ಬೂಕನಬೆಟ್ಟದ ರಂಗನಾಥಸ್ವಾಮಿಯ ರಾಸು ಜಾತ್ರೆಗೆ ರೈತರು, ವ್ಯಾಪಾರಸ್ಥರು, ದೇವಸ್ಥಾನದವರು, ಕಂದಾಯ ಇಲಾಖೆಯವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.</p>.<p>ಒಂದು ವಾರದಿಂದ ರೈತರು, ಪ್ರತಿ ವರ್ಷ ಜಾನುವಾರು ಕಟ್ಟಲು ತಾವು ನಿಗದಿ ಪಡಿಸಿಕೊಂಡಿರುವ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಎತ್ತರಕ್ಕೆ ಮಣ್ಣು ತುಂಬಿಸಿ, ಮರದ ಕಂಬಗಳನ್ನು ನೆಟ್ಟು, ಎತ್ತುಗಳನ್ನು ಕಟ್ಟಲು ಜಾತ್ರೆ ಆವರಣದ ತುಂಬೆಲ್ಲ ದಾವಣಿಯನ್ನು (ಎತ್ತುಗಳನ್ನು ಕಟ್ಟುವ ಜಾಗ) ಅಣಿಮಾಡಿದ್ದಾರೆ.</p>.<p>ದೊಡ್ಡ ಮೊತ್ತದ ಹೋರಿಗಳಿಗಾಗಿ ಕೆಲವು ರೈತರು ಚಪ್ಪರ, ಶಾಮಿಯಾನ ಹಾಕಿಸಿ, ಬಣ್ಣ, ಬಣ್ಣದ ಬೆಟ್ಟೆಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದಾರೆ. ಬುಧವಾರದಿಂದ ರೈತರು ಎತ್ತುಗಳನ್ನು ಮೆರವಣಿಗೆಯಲ್ಲಿ ತಂದು ಜಾತ್ರೆ ಆವರಣದಲ್ಲಿ ಪ್ರದರ್ಶನ ಮಾಡಿ, ದಾವಣಿಯಲ್ಲಿ ಕಟ್ಟುತ್ತಾರೆ. ನಂತರ ವ್ಯಾಪಾರ ಪ್ರಾರಂಭವಾಗುತ್ತದೆ. ಈ ವರ್ಷ ಒಳ್ಳೆಯ ರಾಸುಗಳು ಬರುತ್ತವೆ ಮತ್ತು ಉತ್ತಮ ವ್ಯಾಪಾರ ನಡೆಯುವ ನಿರೀಕ್ಷೆಯಲ್ಲಿದ್ದಾರೆ ರೈತರು.</p>.<p>ನಮ್ಮ ಊರಿನಿಂದ ಎತ್ತುಗಳನ್ನು ಈ ಜಾತ್ರೆಗೆ ಹೊಡೆದುಕೊಂಡು ಬಂದು ಕಟ್ಟುತ್ತೇವೆ. ನಾವು ಈಗ ಸ್ವಚ್ಛ ಮಾಡಿದ್ದೇವೆ ಎನ್ನುತ್ತಾರೆ ಶ್ರವಣಬೆಳಗೊಳ ಹೋಬಳಿಯ ಹುಳಿಗೆರೆ ಗ್ರಾಮದ ರೈತ ನಾಗರಾಜು.</p>.<p>ಜಾತ್ರೆಯಲ್ಲಿ ಮಾಂಸಾಹಾರಿ ಹೋಟೆಲ್ಗಳು, ಸಿಹಿ ತಿಂಡಿ ಅಂಗಡಿಗಳು ಈಗಾಗಲೆ ವ್ಯಾಪಾರ ಪ್ರಾರಂಭಿಸಿವೆ. ಖರ್ಜೂರ, ಅಲಂಕಾರಿಕ, ಗೃಹ ಉಪಯೋಗ ಹಾಗೂ ಕೃಷಿ ಬಳಕೆಯ ವಸ್ತುಗಳು ಸೇರಿದಂತೆ ಇತರೆ ಅಂಗಡಿಗಳನ್ನು ನಿರ್ಮಾಣ ಮಾಡಿ, ವ್ಯಾಪಾರಕ್ಕೆ ಸಿದ್ದರಾಗಿದ್ದಾರೆ.</p>.<p>ಸಂಕ್ರಾಂತಿ ಹಬ್ಬದ ದಿನದಿಂದ ಏಳು ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಹಾಗೂ ಉತ್ಸವ ನಡೆಯುತ್ತದೆ. ಜ.19ರಂದು ಮಧ್ಯಾಹ್ನ 12 ಗಂಟೆಗೆ ಬ್ರಹ್ಮರಥೋತ್ಸವ ಜರುಗುತ್ತದೆ ಎಂದು ದೇವಸ್ಥಾನದ ಪಾರುಪತ್ತೇದಾರ ರಂಗರಾಜು ಮಾಹಿತಿ ನೀಡಿದರು. </p>.<div><blockquote>ಬುಧವಾರದ ನಂತರ ಎತ್ತುಗಳನ್ನು ಜಾತ್ರೆಯಲ್ಲಿ ಕಟ್ಟಲು ಅವಕಾಶ ನೀಡಲಾಗುವುದು. ಅದಕ್ಕಿಂತ ಮೊದಲು ಬರುವ ರಾಸುಗಳಿಗೆ ಅವಕಾಶ ನೀಡುವುದಿಲ್ಲ ಎಲ್ಲ ರೈತರು ಸಹಕರಿಸಿ.</blockquote><span class="attribution">ಎಂ.ಆರ್. ನಾಗೇಶ್ ಹಳ್ಳಿಕಾರ ತಳಿ ಸೇವಕ ಮತಿಘಟ್ಟ</span></div>.<div><blockquote>ಜಾತ್ರೆಗೆ ಬರುವ ರಾಸುಗಳಿಗೆ ಕುಡಿಯುವ ನೀರು ಬೆಳಕು ಸೇರಿದಂತೆ ಮೂಲಸೌಲಭ್ಯ ಒದಗಿಸಲು ಎಲ್ಲ ರೀತಿಯಿಂದ ಸಿದ್ದತೆ ಮಾಡಲಾಗಿದೆ.</blockquote><span class="attribution">ಎಸ್.ಎಲ್. ಯೋಗೇಶ್ ಕಂದಾಯ ನಿರೀಕ್ಷಕ ಹಿರೀಸಾವೆ</span></div>.<p><strong>ರಾಸು ಸುಂಕ ರದ್ದು</strong> </p><p>ಅಂಗಡಿ ಸುಂಕ ದುಬಾರಿ ಈ ವರ್ಷದ ರಾಸು ಮತ್ತು ಎತ್ತಿನ ಗಾಡಿ ಸುಂಕವನ್ನು ಹರಾಜಿನಿಂದ ಕೈಬಿಡಲಾಗಿದೆ. ಆದರೆ ಅಂಗಡಿಗಳ ಮೇಲಿನ ಸುಂಕವು ₹ 10.65 ಲಕ್ಷಕ್ಕೆ ಬಿಡ್ಡ್ ನಿಲ್ಲುವ ಮೂಲಕ ಪ್ರತಿವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಉತ್ತಮ ಎತ್ತುಗಳಿಗೆ ನಗದು ಬಹುಮಾನ ನೀಡುತ್ತಿದ್ದ ಶಾಸಕ ಸಿ.ಎನ್. ಬಾಲಕೃಷ್ಣ ಈ ವರ್ಷದ ಜಾತ್ರೆಯ ಫೂರ್ವಭಾವಿ ಸಭೆಯಲ್ಲಿ ನಗದು ಬದಲು 18 ಜೊತೆ ರಾಸುಗಳಿಗೆ 2 ಗ್ರಾಂನಂತೆ ಚಿನ್ನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೀಸಾವೆ:</strong> ಹಳ್ಳಿಕಾರ್ ತಳಿ ಎತ್ತುಗಳ ಗಂಡು ಜಾತ್ರೆ ಎಂದು ರೈತಾಪಿ ಜನರಲ್ಲಿ ಪ್ರಖ್ಯಾತಿ ಹೊಂದಿರುವ ಬೂಕನಬೆಟ್ಟದ ರಂಗನಾಥಸ್ವಾಮಿಯ ರಾಸು ಜಾತ್ರೆಗೆ ರೈತರು, ವ್ಯಾಪಾರಸ್ಥರು, ದೇವಸ್ಥಾನದವರು, ಕಂದಾಯ ಇಲಾಖೆಯವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.</p>.<p>ಒಂದು ವಾರದಿಂದ ರೈತರು, ಪ್ರತಿ ವರ್ಷ ಜಾನುವಾರು ಕಟ್ಟಲು ತಾವು ನಿಗದಿ ಪಡಿಸಿಕೊಂಡಿರುವ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಎತ್ತರಕ್ಕೆ ಮಣ್ಣು ತುಂಬಿಸಿ, ಮರದ ಕಂಬಗಳನ್ನು ನೆಟ್ಟು, ಎತ್ತುಗಳನ್ನು ಕಟ್ಟಲು ಜಾತ್ರೆ ಆವರಣದ ತುಂಬೆಲ್ಲ ದಾವಣಿಯನ್ನು (ಎತ್ತುಗಳನ್ನು ಕಟ್ಟುವ ಜಾಗ) ಅಣಿಮಾಡಿದ್ದಾರೆ.</p>.<p>ದೊಡ್ಡ ಮೊತ್ತದ ಹೋರಿಗಳಿಗಾಗಿ ಕೆಲವು ರೈತರು ಚಪ್ಪರ, ಶಾಮಿಯಾನ ಹಾಕಿಸಿ, ಬಣ್ಣ, ಬಣ್ಣದ ಬೆಟ್ಟೆಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದಾರೆ. ಬುಧವಾರದಿಂದ ರೈತರು ಎತ್ತುಗಳನ್ನು ಮೆರವಣಿಗೆಯಲ್ಲಿ ತಂದು ಜಾತ್ರೆ ಆವರಣದಲ್ಲಿ ಪ್ರದರ್ಶನ ಮಾಡಿ, ದಾವಣಿಯಲ್ಲಿ ಕಟ್ಟುತ್ತಾರೆ. ನಂತರ ವ್ಯಾಪಾರ ಪ್ರಾರಂಭವಾಗುತ್ತದೆ. ಈ ವರ್ಷ ಒಳ್ಳೆಯ ರಾಸುಗಳು ಬರುತ್ತವೆ ಮತ್ತು ಉತ್ತಮ ವ್ಯಾಪಾರ ನಡೆಯುವ ನಿರೀಕ್ಷೆಯಲ್ಲಿದ್ದಾರೆ ರೈತರು.</p>.<p>ನಮ್ಮ ಊರಿನಿಂದ ಎತ್ತುಗಳನ್ನು ಈ ಜಾತ್ರೆಗೆ ಹೊಡೆದುಕೊಂಡು ಬಂದು ಕಟ್ಟುತ್ತೇವೆ. ನಾವು ಈಗ ಸ್ವಚ್ಛ ಮಾಡಿದ್ದೇವೆ ಎನ್ನುತ್ತಾರೆ ಶ್ರವಣಬೆಳಗೊಳ ಹೋಬಳಿಯ ಹುಳಿಗೆರೆ ಗ್ರಾಮದ ರೈತ ನಾಗರಾಜು.</p>.<p>ಜಾತ್ರೆಯಲ್ಲಿ ಮಾಂಸಾಹಾರಿ ಹೋಟೆಲ್ಗಳು, ಸಿಹಿ ತಿಂಡಿ ಅಂಗಡಿಗಳು ಈಗಾಗಲೆ ವ್ಯಾಪಾರ ಪ್ರಾರಂಭಿಸಿವೆ. ಖರ್ಜೂರ, ಅಲಂಕಾರಿಕ, ಗೃಹ ಉಪಯೋಗ ಹಾಗೂ ಕೃಷಿ ಬಳಕೆಯ ವಸ್ತುಗಳು ಸೇರಿದಂತೆ ಇತರೆ ಅಂಗಡಿಗಳನ್ನು ನಿರ್ಮಾಣ ಮಾಡಿ, ವ್ಯಾಪಾರಕ್ಕೆ ಸಿದ್ದರಾಗಿದ್ದಾರೆ.</p>.<p>ಸಂಕ್ರಾಂತಿ ಹಬ್ಬದ ದಿನದಿಂದ ಏಳು ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಹಾಗೂ ಉತ್ಸವ ನಡೆಯುತ್ತದೆ. ಜ.19ರಂದು ಮಧ್ಯಾಹ್ನ 12 ಗಂಟೆಗೆ ಬ್ರಹ್ಮರಥೋತ್ಸವ ಜರುಗುತ್ತದೆ ಎಂದು ದೇವಸ್ಥಾನದ ಪಾರುಪತ್ತೇದಾರ ರಂಗರಾಜು ಮಾಹಿತಿ ನೀಡಿದರು. </p>.<div><blockquote>ಬುಧವಾರದ ನಂತರ ಎತ್ತುಗಳನ್ನು ಜಾತ್ರೆಯಲ್ಲಿ ಕಟ್ಟಲು ಅವಕಾಶ ನೀಡಲಾಗುವುದು. ಅದಕ್ಕಿಂತ ಮೊದಲು ಬರುವ ರಾಸುಗಳಿಗೆ ಅವಕಾಶ ನೀಡುವುದಿಲ್ಲ ಎಲ್ಲ ರೈತರು ಸಹಕರಿಸಿ.</blockquote><span class="attribution">ಎಂ.ಆರ್. ನಾಗೇಶ್ ಹಳ್ಳಿಕಾರ ತಳಿ ಸೇವಕ ಮತಿಘಟ್ಟ</span></div>.<div><blockquote>ಜಾತ್ರೆಗೆ ಬರುವ ರಾಸುಗಳಿಗೆ ಕುಡಿಯುವ ನೀರು ಬೆಳಕು ಸೇರಿದಂತೆ ಮೂಲಸೌಲಭ್ಯ ಒದಗಿಸಲು ಎಲ್ಲ ರೀತಿಯಿಂದ ಸಿದ್ದತೆ ಮಾಡಲಾಗಿದೆ.</blockquote><span class="attribution">ಎಸ್.ಎಲ್. ಯೋಗೇಶ್ ಕಂದಾಯ ನಿರೀಕ್ಷಕ ಹಿರೀಸಾವೆ</span></div>.<p><strong>ರಾಸು ಸುಂಕ ರದ್ದು</strong> </p><p>ಅಂಗಡಿ ಸುಂಕ ದುಬಾರಿ ಈ ವರ್ಷದ ರಾಸು ಮತ್ತು ಎತ್ತಿನ ಗಾಡಿ ಸುಂಕವನ್ನು ಹರಾಜಿನಿಂದ ಕೈಬಿಡಲಾಗಿದೆ. ಆದರೆ ಅಂಗಡಿಗಳ ಮೇಲಿನ ಸುಂಕವು ₹ 10.65 ಲಕ್ಷಕ್ಕೆ ಬಿಡ್ಡ್ ನಿಲ್ಲುವ ಮೂಲಕ ಪ್ರತಿವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಉತ್ತಮ ಎತ್ತುಗಳಿಗೆ ನಗದು ಬಹುಮಾನ ನೀಡುತ್ತಿದ್ದ ಶಾಸಕ ಸಿ.ಎನ್. ಬಾಲಕೃಷ್ಣ ಈ ವರ್ಷದ ಜಾತ್ರೆಯ ಫೂರ್ವಭಾವಿ ಸಭೆಯಲ್ಲಿ ನಗದು ಬದಲು 18 ಜೊತೆ ರಾಸುಗಳಿಗೆ 2 ಗ್ರಾಂನಂತೆ ಚಿನ್ನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>