<p><strong>ಹಾಸನ</strong>: ‘ತಾಲ್ಲೂಕಿನ ದುದ್ದ ಹೋಬಳಿ ತಿಮ್ಲಾಪುರ ಗ್ರಾಮದಲ್ಲಿ ಕಾನೂನು ಪ್ರಕಾರ ಜಮೀನು ಸರ್ವೇ ನಡೆಸಿ ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದುದ್ದ ಹೋಬಳಿ ಘಟಕದ ರೈತರು ಶುಕ್ರವಾರ ಜಿಲ್ಲಾಧಿಕಾರಿ ಆರ್.ಗಿರೀಶ್ಗೆ ಮನವಿ ಸಲ್ಲಿಸಿದರು.</p>.<p>ತಿಮ್ಲಾಪುರ ಗ್ರಾಮದ ರೈತರು ಒಂದು ಎಕರೆಯಿಂದ ಮೂರು ಎಕರೆ ಜಮೀನು ಉಳ್ಳವರಾಗಿದ್ದಾರೆ. ಚಿತ್ರನಟ ಯಶ್ ಅವರ ಕುಟುಂಬದವರು ಡಾ.ಅಶೋಕ್ ಗೌಡಅವರಿಂದ ಸುಮಾರು 80 ರಿಂದ 100 ಎಕರೆಯಷ್ಟು ಜಮೀನು ಖರೀದಿಸಿದ್ದಾರೆ.ಜಮೀನಿನ ಸುತ್ತ ಕಾಂಪೌಂಡ್ ನಿರ್ಮಿಸಿ ರೈತರಿಗೆ ಓಡಾಡಲು ದಾರಿ ಬಂದ್ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಶ ಕುಟುಂಬದವರು ಗೂಂಡಾಗಳನ್ನು ಕರೆಸಿ ಗಲಾಟೆ ಮಾಡಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ</p>.<p>ಸಂಬಂಧಪಟ್ಟ ಅಧಿಕಾರಿಗಳಿಂದ ಜಮೀನು ಸರ್ವೇ ನಡೆಸಿ, ರೈತರಿಗೆಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕು. ಅನ್ಯಾಯ ಸರಿಪಡಿಸದಿದ್ದರೆ ಪ್ರತಿಭಟನೆಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.</p>.<p>ರೈತ ಮುಖಂಡರಾದ ರಾಜೇಗೌಡ, ಅಣ್ಣಾಜಪ್ಪ, ಈರಯ್ಯ, ತಿಮ್ಮೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ‘ತಾಲ್ಲೂಕಿನ ದುದ್ದ ಹೋಬಳಿ ತಿಮ್ಲಾಪುರ ಗ್ರಾಮದಲ್ಲಿ ಕಾನೂನು ಪ್ರಕಾರ ಜಮೀನು ಸರ್ವೇ ನಡೆಸಿ ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದುದ್ದ ಹೋಬಳಿ ಘಟಕದ ರೈತರು ಶುಕ್ರವಾರ ಜಿಲ್ಲಾಧಿಕಾರಿ ಆರ್.ಗಿರೀಶ್ಗೆ ಮನವಿ ಸಲ್ಲಿಸಿದರು.</p>.<p>ತಿಮ್ಲಾಪುರ ಗ್ರಾಮದ ರೈತರು ಒಂದು ಎಕರೆಯಿಂದ ಮೂರು ಎಕರೆ ಜಮೀನು ಉಳ್ಳವರಾಗಿದ್ದಾರೆ. ಚಿತ್ರನಟ ಯಶ್ ಅವರ ಕುಟುಂಬದವರು ಡಾ.ಅಶೋಕ್ ಗೌಡಅವರಿಂದ ಸುಮಾರು 80 ರಿಂದ 100 ಎಕರೆಯಷ್ಟು ಜಮೀನು ಖರೀದಿಸಿದ್ದಾರೆ.ಜಮೀನಿನ ಸುತ್ತ ಕಾಂಪೌಂಡ್ ನಿರ್ಮಿಸಿ ರೈತರಿಗೆ ಓಡಾಡಲು ದಾರಿ ಬಂದ್ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಶ ಕುಟುಂಬದವರು ಗೂಂಡಾಗಳನ್ನು ಕರೆಸಿ ಗಲಾಟೆ ಮಾಡಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ</p>.<p>ಸಂಬಂಧಪಟ್ಟ ಅಧಿಕಾರಿಗಳಿಂದ ಜಮೀನು ಸರ್ವೇ ನಡೆಸಿ, ರೈತರಿಗೆಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕು. ಅನ್ಯಾಯ ಸರಿಪಡಿಸದಿದ್ದರೆ ಪ್ರತಿಭಟನೆಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.</p>.<p>ರೈತ ಮುಖಂಡರಾದ ರಾಜೇಗೌಡ, ಅಣ್ಣಾಜಪ್ಪ, ಈರಯ್ಯ, ತಿಮ್ಮೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>