ತಿಮ್ಲಾಪುರ ಗ್ರಾಮದ ರೈತರು ಒಂದು ಎಕರೆಯಿಂದ ಮೂರು ಎಕರೆ ಜಮೀನು ಉಳ್ಳವರಾಗಿದ್ದಾರೆ. ಚಿತ್ರನಟ ಯಶ್ ಅವರ ಕುಟುಂಬದವರು ಡಾ.ಅಶೋಕ್ ಗೌಡಅವರಿಂದ ಸುಮಾರು 80 ರಿಂದ 100 ಎಕರೆಯಷ್ಟು ಜಮೀನು ಖರೀದಿಸಿದ್ದಾರೆ.ಜಮೀನಿನ ಸುತ್ತ ಕಾಂಪೌಂಡ್ ನಿರ್ಮಿಸಿ ರೈತರಿಗೆ ಓಡಾಡಲು ದಾರಿ ಬಂದ್ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಶ ಕುಟುಂಬದವರು ಗೂಂಡಾಗಳನ್ನು ಕರೆಸಿ ಗಲಾಟೆ ಮಾಡಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ