ಬುಧವಾರ ಬೆಳಿಗ್ಗೆ ಶ್ರೀಕಾಂತ್ ಕುಟುಂಬ ಡೇರಿಗೆ ಹಾಲು ಹಾಕಲು ಹೋದಾಗ ಗ್ರಾಮದ ದೇವೇಗೌಡ, ಆನಂದ್, ನಾಗಣ್ಣ, ಶ್ರೀನಿವಾಸಚಾರ್ ಮತ್ತು ಮಹೀಂದ್ರ ಗಲಾಟೆ ಮಾಡಿದ್ದಾರೆ. ಉತ್ಸವ ಮಾಡದ ಕಾರಣ ಹಾಲನ್ನು ಪಡೆಯುವುದಿಲ್ಲವೆಂದು ಕ್ಯಾತೆ ತೆಗೆದಿದ್ದಾರೆ. ಈ ಗಲಾಟೆ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲು ಹೋದ ಶ್ರೀಕಾಂತ್ ಅವರ ಮೊಬೈಲ್ ಕಿತ್ತುಕೊಂಡು ಪುಡಿ ಮಾಡಿದ್ದಾರೆ. ಅವರ ತಾಯಿ ಮೇಲೂ ಹಲ್ಲೆ ನಡೆಸಿದ್ದಾರೆ.