ಹಾಸನ, ಬೇಲೂರು, ಹಳೇಬೀಡು, ಶ್ರವಣಬೆಳಗೋಳ, ಚನ್ನರಾಯಪಟ್ಟಣ, ಅರಕಲಗೂಡು, ಅರಸೀಕೆರೆ ಸೇರಿದಂತೆ ಹೊರ ಜಿಲ್ಲೆಗಳಿಂದ ರೈತರು ದನಗಳನ್ನು ಜಾತ್ರೆಗೆ ಕರೆ ತರುತ್ತಾರೆ. ನಿತ್ಯ ನೂರಾರು ಜಾನುವಾರುಗಳು ಮಾರಾಟವಾಗುತ್ತವೆ. ಹಿಂದೆ ಉತ್ತಮ ತಳಿಯ ಜಾನುವಾರುಗಳಿಗೆ ಬಹುಮಾನ ನೀಡಲಾಗಿತ್ತು. ಆದರೆ ಈಗ ಬಹುಮಾನ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಳವಡಿಸಿರುವ ವಿದ್ಯುತ್ ಕಂಬಗಳು ಜೋರು ಗಾಳಿಗೆ ಕೆಳಗೆ ಬಿದ್ದು, ರೈತರೊಬ್ಬರಿಗೆ ಪೆಟ್ಟಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಐದಾರು ಹೊಲಿಗೆ ಹಾಕಲಾಗಿದೆ. ಈ ರೀತಿ ಅವಘಡ ಸಂಭವಿಸಿದರೆ ಅವರನ್ನೇ ನಂಬಿಕೊಂಡಿರುವ ಕುಟುಂಬ ಸದಸ್ಯರಿಗೆ ಯಾರು ದಿಕ್ಕು ಎಂದು ಮುದ್ದಳ್ಳಿ ರೈತ ಜವರೇಗೌಡ ಪ್ರಶ್ನಿಸಿದರು.