ರಾಗಿ ಬೆಳೆಯಲು ರೈತರು ಹೆಚ್ಚು ಶ್ರಮ ವಹಿಸಬೇಕಾಗಿದೆ. ಕೊಟ್ಟಿಗೆ ಗೊಬ್ಬರ ಬಳಸಿ, ನಂತರ ಹೊಲವನ್ನು ಹದವಾಗಿ ಕಳೆ ನಾಶವಾಗುವಂತೆ ಉಳುಮೆ ಮಾಡಿ, ಬೆರಗು ನೋಡಿ ಬಿತ್ತನೆ ಮಾಡಿದರೆ ಮಾತ್ರ ಚೆನ್ನಾಗಿ ಬರುತ್ತದೆ. ಕಾಲಕ್ಕೆ ಸರಿಯಾಗಿ ಹರತೆ, ಕಳೆ ತೆಗೆಯುವುದನ್ನು ಮಾಡಿ, ಸಕಾಲಕ್ಕೆ ಮಳೆಯಾದರೆ ಹುಲುಸಾದ ಬೆಳೆ ಬರುತ್ತದೆ.