ಸುಮಾರು 70 ಎಕರೆ ಪ್ರದೇಶದಲ್ಲಿನ ಸತ್ಯಮಂಗಲ ಕೆರೆಯನ್ನು ಕೆಲವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ₹ 4.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಕೆರೆಯ ಹೂಳು ತೆಗೆಯಲಾಗಿದೆ. ಉದ್ಯಾನ ನಿರ್ಮಾಣ, ಕೆರೆಯ ಸುತ್ತ ಬೇಲಿ ನಿರ್ಮಿಸುವ ಮೂಲಕ ಕೆರೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಕೆಲವರು ಕೆರೆಯ ಮಣ್ಣನ್ನು ಮನಸೋ ಇಚ್ಛೆ ತೆಗೆದು ಕೆರೆಯನ್ನು ವಿರೂಪಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.