ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗ ಯಾವುದೂ ಉಪಚುನಾವಣೆ ಇಲ್ಲ. ಇದ್ದಿದ್ದರೆ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಲಾಕ್ಡೌನ್ನಿಂದ ಜನರು ಪಡುತ್ತಿರುವ ಕಷ್ಟ ನೋಡಿದಾಗ ದೇವೇಗೌಡರಂತಹ ಅನುಭವಿ ರಾಜಕಾರಣಿ ದೇಶಕ್ಕೆ ಅವಶ್ಯಕತೆ ಇದೆ. ರಾಜ್ಯಸಭೆಗ ಹೋಗುವುದು ಹಿಂಬಾಗಿಲ ಪ್ರವೇಶ ಎಂದು ಭಾವಿಸದೆ, ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಪಕ್ಷ ಬೇಧ ಮರೆತು ಗೆಲ್ಲಿಸುತ್ತಾರೆಂಬ ವಿಶ್ವಾಸ ಇದೆ. ಕಾಂಗ್ರೆಸ್ ಬಳಿ ಹೆಚ್ಚುವರಿ ಮತ ಇದೆ. ಅವರು ಸಹಕಾರ ನೀಡಿದರೆ, ಸಮಯ ಬಂದಾಗ ಅವರಿಗೆ ನೆರವಾಗುತ್ತೇವೆ ಎಂದು ಹೇಳಿದರು.