‘ಕಿರಣ್ ಕುಮಾರ್ ಕಾಲಿನಲ್ಲಿದ್ದ ಗಂಟಿಗೆ ಚಿಕಿತ್ಸೆ ನೀಡುತ್ತಿದೆ. ಹೆಚ್ಚು ಓಡಾಡಬಾರದು ಎಂದೂ ತಿಳಿಸಿದ್ದೆನು. ಪೊಲೀಸ್ ತರಬೇತಿಯಲ್ಲಿ ಭಾಗವಹಿಸಬೇಕು ಎಂದಿದ್ದ. ನಾನು ಮೂರುದಿನಗಳ ಹಿಂದೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಗುಣವಾಗಿ ಆರಾಮವಾಗಿ ಓಡಾಡುತ್ತಿದ್ದರು. ಶುಕ್ರವಾರ ಮತ್ತೆ ಡ್ರಸ್ಸಿಂಗ್ ಮಾಡಿದ್ದೆನು. ಇದ್ದಕ್ಕಿಂದಂತೆ ಸುಸ್ತಾಗುತ್ತಿದೆ ಎಂದವನು ತಕ್ಷಣ ಕೆಳಕ್ಕೆ ಬಿದ್ದ. ನಾವು ಇತರೆ ವೈದ್ಯರು ತಕ್ಷಣ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡುವ ವೇಳೆಗೆ ಹೃದಯ ಸ್ಥಂಭನವಾಗಿತ್ತು’ ಎಂದು ಡಾ. ಪ್ರತಿಭಾ ತಿಳಿಸಿದ್ದಾರೆ.