ದೋಣಿಗಾಲ್ನಿಂದ ಮಾರನಹಳ್ಳಿ ವರೆಗೆ ಸುಮಾರು 25ಕ್ಕೂ ಹೆಚ್ಚು ಕಡಿದಾದ ತಿರುವು, ನೂರಾರು ಅಡಿ ಆಳದ ಕಂದಕ, ಎತ್ತರದ ಗುಡ್ಡಗಳು ಇವೆ. 2017 ರಲ್ಲಿ ಹೆದ್ದಾರಿ ವಿಸ್ತರಣೆ ಮಾಡಿ ಗುಡ್ಡಗಳನ್ನು ಬಗೆದು, ತಡೆಗೋಡೆ ನಿರ್ಮಾಣ ಮಾಡದ ಕಾರಣ 2018 ರಿಂದ ಪ್ರತಿ ವರ್ಷದ ಮಳೆಗಾಲದಲ್ಲಿ ದೊಡ್ಡತಪ್ಪಲೆ, ದೋಣಿಗಾಲ್ ಕೆಸಗಾನಹಳ್ಳಿ, ಕಪ್ಪಳ್ಳಿ ಭಾಗದಲ್ಲಿ ಪದೇ ಪದೇ ಭೂ ಕುಸಿತ ಉಂಟಾಗಿ ಮೂರು ನಾಲ್ಕು ತಿಂಗಳು ಈ ಮಾರ್ಗದ ಸಂಚಾರ ಬಂದ್ ಮಾಡಬೇಕಾಗಿದೆ.