ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಲು ತೆರಳಿದ್ದ ಬಾಲಕರು ನೀರು ಪಾಲು

Last Updated 21 ಅಕ್ಟೋಬರ್ 2018, 19:05 IST
ಅಕ್ಷರ ಗಾತ್ರ

ಅರಸೀಕೆರೆ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಹೂಳಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಜಾವಗಲ್ ಹೋಬಳಿಯ ಅರಕೆರೆ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ನಾಗೇನಹಳ್ಳಿ ಸೃಜನ್ (11) ಹಾಗೂ ನಿಢಗಟ್ಟ ಗ್ರಾಮದ ಹೇಮಂತ್ (10) ಮೃತಪಟ್ಟವರು. ರಜೆ ಹಿನ್ನಲೆಯಲ್ಲಿ ಬಾಲಕರು ನಾಮಕರಣಕ್ಕೆ ದೊಡ್ಡಮ್ಮನ ಮನೆ ಅರಕೆರೆಗೆ ಬಂದಿದ್ದರು.

ನಾಲ್ವರು ಸ್ನೇಹಿತರು ಈಜಲು ಬಂದಿದ್ದಾರೆ. ಇದರಲ್ಲಿ ಸೃಜನ್‌, ಹೇಮಂತ್‌ ಕೆರೆಗೆ ಇಳಿದಾಗ ಕೆಸರಿನಲ್ಲಿ ಸಿಲುಕಿ ಮೇಲೆ ಬರಲು ಆಗಲಿಲ್ಲ. ಭಯಗೊಂಡ ಮತ್ತಿಬ್ಬರು ಈ ವಿಷಯವನ್ನು ಯಾರಿಗೂ ತಿಳಿಸಲಿಲ್ಲ. ಸಂಜೆ ಮನೆಗೆ ಬಾರದಿದ್ದಾಗ

ಅನುಮಾನಗೊಂಡ ಪೋಷಕರು ವಿಚಾರಿಸಿದಾಗ ನಡೆದ ಘಟನೆ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT