<p><strong>ಆಲೂರು</strong>: ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಭೀತಿಯಲ್ಲಿಯೇ ಓಡಾಡುವಂತಾಗಿದೆ. ಅದರಲ್ಲಿಯೂ ಸಂಜೆಯ ವೇಳೆ ಮನೆಗೆ ತೆರಳುವವರಿಗೆ ಬಸ್ ಸೌಲಭ್ಯ ಇಲ್ಲದೇ ಆತಂಕದಲ್ಲಿಯೇ ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.</p><p>ಪಾಳ್ಯ ಹೋಬಳಿಯಲ್ಲಿ ವಾರದಿಂದ ಆನೆಗಳ ಉಪಟಳ ಹೆಚ್ಚಾಗಿದ್ದು, ಸೋಮವಾರ ಸಂಜೆ ತಾಳೂರು ವ್ಯಾಪ್ತಿಯಲ್ಲಿ ಕಾಡಾನೆಯೊಂದು ರಸ್ತೆ ದಾಟಿದೆ. ಇದರಿಂದಾಗಿ ಕಾರು ಮತ್ತು ಬೈಕ್ನಲ್ಲಿ ತೆರಳುತ್ತಿದ್ದವರು ಕೆಲಕಾಲ ಭಯಭೀತರಾಗಿದ್ದರು. ಸಂಜೆ 6 ಗಂಟೆಗೆ ಆಲೂರು ಬಸ್ ನಿಲ್ದಾಣದಿಂದ ಬಿಕ್ಕೋಡು ಮಾರ್ಗವಾಗಿ ಬೇಲೂರಿಗೆ ಬಸ್ ಇಲ್ಲದೇ ಇರುವುದರಿಂದ ನಿತ್ಯ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ ಎಂದು ಜನರು ಅಳಲು ತೋಡಿಕೊಂಡರು.</p><p>ಆಲೂರಿನಿಂದ ಬಿಕ್ಕೋಡು ಮಾರ್ಗವಾಗಿ ಬೇಲೂರಿಗೆ ಹೋಗಲು ಸಂಜೆ 5 ಗಂಟೆಗೆ ಮೈಸೂರಿನಿಂದ ಅರೇಹಳ್ಳಿಗೆ ಹೋಗುವ ಬಸ್, ಕಣತೂರು-ಕೆಸಗೋಡು-ಬಿಕ್ಕೋಡು ಮಾರ್ಗವಾಗಿ ಅರೇಹಳ್ಳಿಗೆ ಹೋಗಿ ತಂಗುವ ಬಸ್ ಇವೆ. 5 ಗಂಟೆಯ ನಂತರ ಈ ಮಾರ್ಗದಲ್ಲಿ ಬಸ್ ಸಂಚಾರವಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೈಕ್, ಟಂಟಂ, ಆಟೋಗಳ ಮೂಲಕ ಊರು ಸೇರುವಂತಾಗಿದೆ. ಆದರೆ, ರಾತ್ರಿ ವೇಳೆ ಕಾಡಾನೆಗಳು ಎದುರಾದರೆ, ನಮ್ಮ ಗತಿ ಏನು ಎನ್ನುವ ಆತಂಕ ನಿತ್ಯ ನಮ್ಮನ್ನು ಕಾಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.</p><p>ಕೋವಿಡ್–19 ಗಿಂತ ಮೊದಲು ಈ ಮಾರ್ಗದಲ್ಲಿ ಅರಸೀಕರೆ-ಮೂಡಿಗೆರೆ ಬಸ್ ಓಡಾಡುತ್ತಿತ್ತು. ಆಲೂರಿಗೆ ಸಂಜೆ 6 ಗಂಟೆಗೆ ಬರುತ್ತಿದ್ದ ಬಸ್ನಿಂದಾಗಿ, ಶಾಲಾ– ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕಚೇರಿಗಳಲ್ಲಿ ಕೆಲಸ ಮುಗಿದ ನಂತರ ಓಡಾಡಲು ಅನುಕೂಲವಾಗಿತ್ತು. ಕೋವಿಡ್–19 ಮುಗಿದ ನಂತರ ಈ ಬಸ್ ಸಂಚಾರ ಆರಂಭವಾಗಿಲ್ಲ.</p><p>ಈಗ ಕಾಡಾನೆಗಳ ಉಪಟಳದಿಂದ ಜನರು ತಿರುಗಾಡಲು ಭಯಭೀತರಾಗಿದ್ದು, ಆಲೂರು ಬಸ್ ನಿಲ್ದಾಣದಿಂದ ಸಂಜೆ 6 ಗಂಟೆಗೆ ಬಿಕ್ಕೋಡು-ಬೇಲೂರು ಮಾರ್ಗವಾಗಿ ಬಸ್ ಓಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p><p>ಬಿಕ್ಕೋಡು, ಬೇಲೂರು ಮತ್ತು ಸುತ್ತಲಿನ 50 ಕ್ಕೂ ಹೆಚ್ಚು ಹಳ್ಳಿಗಳಿಂದ ಪ್ರತಿದಿನ ಶಾಲಾ– ಕಾಲೇಜು ಮತ್ತು ಕಚೇರಿಗಳಿಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಆಲೂರಿಗೆ ಬರುತ್ತಾರೆ. ಸಂಜೆ 5 ರ ನಂತರ ಬಸ್ ಇಲ್ಲದಿರುವುದರಿಂದ ಕಾಡಾನೆಗಳ ಉಪಟಳದಿಂದ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ ಎನ್ನುವುದು ಜನರು ಹೇಳುವ ಮಾತು.</p>.<div><blockquote>ಸಂಜೆ 6 ಗಂಟೆಗೆ ಆಲೂರು ಬಸ್ ನಿಲ್ದಾಣದಿಂದ ಬಿಕ್ಕೋಡು-ಬೇಲೂರು ಮಾರ್ಗವಾಗಿ ಬಸ್ ಸಂಚಾರ ಆರಂಭಿಸಬೇಕು. ಸುರಕ್ಷಿತವಾಗಿ ಮನೆ ತಲುಪಲು ಅನುಕೂಲ ಮಾಡಿಕೊಡಬೇಕು </blockquote><span class="attribution">ಕೆ.ಎಸ್. ಮಂಜುನಾಥ್, ಕಾಲೇಜು ವಿದ್ಯಾರ್ಥಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು</strong>: ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಭೀತಿಯಲ್ಲಿಯೇ ಓಡಾಡುವಂತಾಗಿದೆ. ಅದರಲ್ಲಿಯೂ ಸಂಜೆಯ ವೇಳೆ ಮನೆಗೆ ತೆರಳುವವರಿಗೆ ಬಸ್ ಸೌಲಭ್ಯ ಇಲ್ಲದೇ ಆತಂಕದಲ್ಲಿಯೇ ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.</p><p>ಪಾಳ್ಯ ಹೋಬಳಿಯಲ್ಲಿ ವಾರದಿಂದ ಆನೆಗಳ ಉಪಟಳ ಹೆಚ್ಚಾಗಿದ್ದು, ಸೋಮವಾರ ಸಂಜೆ ತಾಳೂರು ವ್ಯಾಪ್ತಿಯಲ್ಲಿ ಕಾಡಾನೆಯೊಂದು ರಸ್ತೆ ದಾಟಿದೆ. ಇದರಿಂದಾಗಿ ಕಾರು ಮತ್ತು ಬೈಕ್ನಲ್ಲಿ ತೆರಳುತ್ತಿದ್ದವರು ಕೆಲಕಾಲ ಭಯಭೀತರಾಗಿದ್ದರು. ಸಂಜೆ 6 ಗಂಟೆಗೆ ಆಲೂರು ಬಸ್ ನಿಲ್ದಾಣದಿಂದ ಬಿಕ್ಕೋಡು ಮಾರ್ಗವಾಗಿ ಬೇಲೂರಿಗೆ ಬಸ್ ಇಲ್ಲದೇ ಇರುವುದರಿಂದ ನಿತ್ಯ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ ಎಂದು ಜನರು ಅಳಲು ತೋಡಿಕೊಂಡರು.</p><p>ಆಲೂರಿನಿಂದ ಬಿಕ್ಕೋಡು ಮಾರ್ಗವಾಗಿ ಬೇಲೂರಿಗೆ ಹೋಗಲು ಸಂಜೆ 5 ಗಂಟೆಗೆ ಮೈಸೂರಿನಿಂದ ಅರೇಹಳ್ಳಿಗೆ ಹೋಗುವ ಬಸ್, ಕಣತೂರು-ಕೆಸಗೋಡು-ಬಿಕ್ಕೋಡು ಮಾರ್ಗವಾಗಿ ಅರೇಹಳ್ಳಿಗೆ ಹೋಗಿ ತಂಗುವ ಬಸ್ ಇವೆ. 5 ಗಂಟೆಯ ನಂತರ ಈ ಮಾರ್ಗದಲ್ಲಿ ಬಸ್ ಸಂಚಾರವಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೈಕ್, ಟಂಟಂ, ಆಟೋಗಳ ಮೂಲಕ ಊರು ಸೇರುವಂತಾಗಿದೆ. ಆದರೆ, ರಾತ್ರಿ ವೇಳೆ ಕಾಡಾನೆಗಳು ಎದುರಾದರೆ, ನಮ್ಮ ಗತಿ ಏನು ಎನ್ನುವ ಆತಂಕ ನಿತ್ಯ ನಮ್ಮನ್ನು ಕಾಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.</p><p>ಕೋವಿಡ್–19 ಗಿಂತ ಮೊದಲು ಈ ಮಾರ್ಗದಲ್ಲಿ ಅರಸೀಕರೆ-ಮೂಡಿಗೆರೆ ಬಸ್ ಓಡಾಡುತ್ತಿತ್ತು. ಆಲೂರಿಗೆ ಸಂಜೆ 6 ಗಂಟೆಗೆ ಬರುತ್ತಿದ್ದ ಬಸ್ನಿಂದಾಗಿ, ಶಾಲಾ– ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕಚೇರಿಗಳಲ್ಲಿ ಕೆಲಸ ಮುಗಿದ ನಂತರ ಓಡಾಡಲು ಅನುಕೂಲವಾಗಿತ್ತು. ಕೋವಿಡ್–19 ಮುಗಿದ ನಂತರ ಈ ಬಸ್ ಸಂಚಾರ ಆರಂಭವಾಗಿಲ್ಲ.</p><p>ಈಗ ಕಾಡಾನೆಗಳ ಉಪಟಳದಿಂದ ಜನರು ತಿರುಗಾಡಲು ಭಯಭೀತರಾಗಿದ್ದು, ಆಲೂರು ಬಸ್ ನಿಲ್ದಾಣದಿಂದ ಸಂಜೆ 6 ಗಂಟೆಗೆ ಬಿಕ್ಕೋಡು-ಬೇಲೂರು ಮಾರ್ಗವಾಗಿ ಬಸ್ ಓಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p><p>ಬಿಕ್ಕೋಡು, ಬೇಲೂರು ಮತ್ತು ಸುತ್ತಲಿನ 50 ಕ್ಕೂ ಹೆಚ್ಚು ಹಳ್ಳಿಗಳಿಂದ ಪ್ರತಿದಿನ ಶಾಲಾ– ಕಾಲೇಜು ಮತ್ತು ಕಚೇರಿಗಳಿಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಆಲೂರಿಗೆ ಬರುತ್ತಾರೆ. ಸಂಜೆ 5 ರ ನಂತರ ಬಸ್ ಇಲ್ಲದಿರುವುದರಿಂದ ಕಾಡಾನೆಗಳ ಉಪಟಳದಿಂದ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ ಎನ್ನುವುದು ಜನರು ಹೇಳುವ ಮಾತು.</p>.<div><blockquote>ಸಂಜೆ 6 ಗಂಟೆಗೆ ಆಲೂರು ಬಸ್ ನಿಲ್ದಾಣದಿಂದ ಬಿಕ್ಕೋಡು-ಬೇಲೂರು ಮಾರ್ಗವಾಗಿ ಬಸ್ ಸಂಚಾರ ಆರಂಭಿಸಬೇಕು. ಸುರಕ್ಷಿತವಾಗಿ ಮನೆ ತಲುಪಲು ಅನುಕೂಲ ಮಾಡಿಕೊಡಬೇಕು </blockquote><span class="attribution">ಕೆ.ಎಸ್. ಮಂಜುನಾಥ್, ಕಾಲೇಜು ವಿದ್ಯಾರ್ಥಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>