ಮಂಡ್ಯದ ಆರ್.ಎಲ್.ಪಟೇಲ್ (35) ಮೃತ ವ್ಯಕ್ತಿ. ಸ್ನೇಹಿತರೊಂದಿಗೆ ತಾಲ್ಲೂಕಿನ ಹೋಂ ಸ್ಟೇ ಒಂದಕ್ಕೆ ಭಾನುವಾರ ಬಂದಿದ್ದರು. ಸೋಮವಾರ ಮಂಡ್ಯಕ್ಕೆ ವಾಪಾಸಾಗುತ್ತಿದ್ದರು. ಕಾಫಿ ಪುಡಿ ಖರೀದಿಸಲು ವಾಹನದಿಂದ ಇಳಿದು ಅಂಗಡಿಗೆ ಹೋಗುತ್ತಿದ್ದಾಗ ಒಣಗಿದ್ದ ಕೊಂಬೆ ನೇರವಾಗಿ ತಲೆ ಮೇಲೆ ಬಿದ್ದಿದೆ. ಕೊಂಬೆ ಭಾರೀ ಗಾತ್ರದಲ್ಲಿ ಇದ್ದ ಕಾರಣ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ.