ಮಂಗಳವಾರ ಬೆಳಿಗ್ಗೆ ಅಗಿಲೇ ಯೋಗೇಶ್ ಅವರು ನಗರದ ಪೆನ್ಷನ್ ಮೊಹಲ್ಲಾದಹೊಸಲೈನ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಲುಮುಂದಾದರು. ಅಮೃತ್ ಯೋಜನೆ ಪೈಪ್ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದು ಮಣ್ಣು ಮುಚ್ಚಲಾಗಿದೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚಿಸಬೇಕು ಎಂದು ಆಗ್ರಹಿಸಿ ಎತ್ತುಗಳನ್ನು ತಂದು ರಸ್ತೆಯಲ್ಲಿಯೇ ಉಳುಮೆ ಮಾಡಿ ಜೋಳ ಬಿತ್ತನೆ ಮಾಡುತ್ತಿದ್ದರು.