‘ನಾವು ವಾಸವಾಗಿರುವ ಮನೆಗಳು ಕಿಷ್ಕಿಂಧೆಯಾಗಿವೆ. ಮಕ್ಕಳು, ದನ– ಕರು ಕಟ್ಟಿಕೊಂಡು ಜೀವನ ಸಾಗಿಸುವುದು ಕಷ್ಟವಾಗಿದೆ. ಹೀಗಾಗಿ ಗೋಮಾಳದಲ್ಲಿ ಗುಡಿಸಲು ಹಾಕಿ ಕೊಂಡಿದ್ದೇವೆ. ಈಗ ಗುಡಿಸಲುಗಳು ಸುಟ್ಟು ಹೋಗಿದ್ದು, ದಿಕ್ಕು ತೋಚದಂತಾಗಿದೆ. ಸರ್ಕಾರದಿಂದಲೇ ನಮಗೆ ಗೋಮಾಳದಲ್ಲಿ ನಿವೇಶನ ನೀಡಬೇಕು. ಸೂಕ್ತ ರಕ್ಷಣೆ ನೀಡಬೇಕು’ ಎಂದು ಲಲಿತಮ್ಮ, ಹಾಲಮ್ಮ ಹಾಗೂ ರಂಗಸ್ವಾಮಿ ಅಳಲು ತೋಡಿಕೊಂಡರು.