<p><strong>ಹಳೇಬೀಡು:</strong> ಕುಂಬಾರ ಸಮಾಜದ ಕುಲದೈವ ಕುಂಬಳೇಶ್ವರ ದೇವಾಲಯ, ಹೊಯ್ಸಳ ಶೈಲಿಯ ವಾಸ್ತುಶಿಲ್ಪದೊಂದಿಗೆ ವಿಶಿಷ್ಟವಾಗಿದೆ. ಹಳೇಬೀಡಿನ ಬ್ರಾಹ್ಮಣ ಬೀದಿ ಸಮೀಪದಲ್ಲಿರುವ ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ ವೈಭವದಿಂದ ನಡೆಯುತ್ತದೆ. </p>.<p>ನೂರಾರು ವರ್ಷ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದ್ದ ದೇವಾಲಯವನ್ನು ಸ್ಥಳೀಯ ಕುಂಬಾರ ಸಮಾಜ 19 ವರ್ಷದ ಹಿಂದೆ ಜೀರ್ಣೋದ್ಧಾರ ಮಾಡಿಸಿ, ನಿತ್ಯ ಪೂಜೆ, ಹುಣ್ಣಿಮೆ ಕಟ್ಟಳೆ, ಶಿವರಾತ್ರಿ ವಿಶೇಷ ಪೂಜೆ, ಜಾಗರಣೆ ನಡೆಸುತ್ತಿದೆ. ಹಳೇಬೀಡಿನಲ್ಲಿ ಕೇವಲ 15 ಕುಟುಂಬ ನೆಲೆಸಿದ್ದರೂ, ದೇವಾಲಯ ಉಳಿಸಿದ್ದಾರೆ.</p>.<p>ಶತ್ರುಗಳ ದಾಳಿಯಿಂದ ಹೊಯ್ಸಳರ ನಾಡಿನ ಶಿಲ್ಪಕಲಾ ದೇವಾಲಯಗಳು ಭಗ್ನಗೊಂಡಿದ್ದವು. ಹೊಯ್ಸಳರ ಸಾಮ್ರಾಜ್ಯದ ಅವನತಿಯ ನಂತರ ಸಾಕಷ್ಟು ದೇವಾಲಯಗಳು ನಿರ್ವಹಣೆ ಇಲ್ಲದೇ ಸೊರಗಿದವು. ಕುಂಬಳೇಶ್ವರ ದೇವಾಲಯವೂ ನಿರ್ವಹಣೆ ಇಲ್ಲದೇ ಸೊರಗಿತ್ತು. ಕುಂಬಾರ ಸಮಾಜ ಹಲವಾರು ಬಾರಿ ದೇವಾಲಯ ಜೀರ್ಣೋದ್ಧಾರ ಮಾಡುವ ಪ್ರಯತ್ನ ನಡೆಸಿದರೂ ಕಾರ್ಯಗತವಾಗಲಿಲ್ಲ. 1925 ರಲ್ಲಿ ಮಾದಪ್ಪಶೆಟ್ಟಿ ಎಂಬುವವರು ಸಮಾಜವನ್ನು ಒಗ್ಗೂಡಿಸಿ ಜೀರ್ಣೋದ್ಧಾರಕ್ಕೆ ಕೈಹಾಕಿದ್ದರು. ಕುಟುಂಬಕ್ಕೆ ₹1ರಂತೆ ಹಣ ಸಂಗ್ರಹಿಸುವ ನಿರ್ಣಯ ಕೈಗೊಂಡಿದ್ದರು ಎಂಬುದಕ್ಕೆ ದಾಖಲೆಗಳು ದೊರೆತಿವೆ ಎಂದು ಸಮಾಜದ ಜಗದೀಶ ಹೇಳುತ್ತಾರೆ.</p>.<p>ಸ್ಥಳೀಯ ಕುಂಬಾರರು ಒಗ್ಗೂಡಿ 2005 ರಲ್ಲಿ ಹೊಸದಾಗಿ ಸಮಿತಿ ರಚನೆ ಮಾಡಿಕೊಂಡು ದೇವಾಲಯ ಜೀರ್ಣೋದ್ಧಾರ ಮಾಡಿಸಿದರು. ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕುಂಬಾರ ಗುಂಡಯ್ಯ ಶಿವಶರಣ ಅವರ ಸಾನಿಧ್ಯದಲ್ಲಿ ದೇವಾಲಯದ ಸಂಪ್ರೋಕ್ಷಣೆ ಮಾಡಲಾಗಿದೆ. ಅಂದಿನಿಂದ ಸ್ಥಳೀಯ ಕುಂಬಾರ ಸಮಾಜ ದೇವಾಲಯದ ಪೂಜೆ ಹಾಗೂ ನಿರ್ವಹಣೆ ನೋಡಿಕೊಳ್ಳುತ್ತಿದೆ ಎನ್ನುತ್ತಾರೆ ಸ್ಥಳೀಯರು.</p>.<p>ದೇವಾಲಯ ಗರ್ಭಗುಡಿ, ಸುಖನಾಸಿ, ವಿಶಾಲವಾದ ನವರಂಗ ಹಾಗೂ ಮುಖ ಮಂಟಪ ಹೊಂದಿದೆ. ಮುಖಮಂಟಪದಲ್ಲಿ ಭಕ್ತರು, ದೇವಾಲಯದ ಆಗು ಹೋಗುಗಳ ಬಗ್ಗೆ ಸಮಾಲೋಚನೆ ನಡೆಸಲು ಅನುಕೂಲವಾಗಿದೆ.</p>.<p>ಮೂಲ ಸ್ವರೂಪ ಉಳಿಸಿಕೊಂಡು ದುರಸ್ತಿ ಮಾಡಿರುವ ದೇವಾಲಯದಲ್ಲಿ ಕಂಬಗಳು ಆಕರ್ಷಣೀಯವಾಗಿವೆ. ಕಂಬಗಳಲ್ಲಿ ನಾಜೂಕಾದ ಸೂಕ್ಷ್ಮ ಕೆತ್ತನೆಯ ವಿಗ್ರಹ ಮೂಡಿಸಲಾಗಿದೆ. ನೂರಾರು ವರ್ಷ ದೇವಾಲಯ ಪಾಳು ಬಿದ್ದ ಸ್ಥಿತಿಯಲ್ಲಿದ್ದರೂ, ಗರ್ಭಗುಡಿಯ ಲಿಂಗ, ಮುಖ ಮಂಟಪಕ್ಕೆ ಹೊಂದಿಕೊಂಡಿರುವ ಗೋಡೆಯ ಮೇಲಿರುವ ಗಣೇಶ ಮೂರ್ತಿ ಅಚ್ಚಳಿಯದಂತೆ ಉಳಿದಿವೆ.</p>.<p>ಗರ್ಭಗುಡಿಯ ಲಿಂಗ ಹಾಗೂ ಗಣೇಶ ಮೂರ್ತಿಗೆ ನಿತ್ಯಪೂಜೆ ಹಾಗೂ ವಿಶೇಷ ಪೂಜೆ ನಡೆಯುತ್ತಿದೆ. ಕಂಬಗಳು ಮೇಲಿನ ಕಲಾಕೃತಿ, ದೇವತೆಗಳ ವಿಗ್ರಹ ಆಕರ್ಷಣೀಯವಾಗಿವೆ. ದೇವಾಲಯಕ್ಕೆ ಉಂಬಳಿ ಬಿಟ್ಟಿರುವ ದಾಖಲೆ ಸಿಕ್ಕಿಲ್ಲ. ಹೀಗಾಗಿ ದೇಗುಲ ಮುಜಾರಾಯಿ ಇಲಾಖೆಗೆ ಸೇರಿಲ್ಲ. ದೇವಾಲಯಕ್ಕೆ ಸಂಬಂಧಿಸಿದ ಶಾಸನ ಮಾಹಿತಿ ದೊರಕಿಲ್ಲ. ಹೀಗಾಗಿ ಪುರಾತತ್ವ ಇಲಾಖೆಯ ಸಂರಕ್ಷಣೆಗೂ ಒಳಪಟ್ಟಿಲ್ಲ. ಕುಲದೇವರ ಮೇಲಿನ ನಂಬಿಕೆಯಿಂದ ಕುಂಬಾರ ಸಮಾಜ ಪ್ರಾಚೀನ ಕಲೆ, ಸಂಸ್ಕೃತಿ ಹಾಗೂ ಇತಿಹಾಸದ ಅವಶೇಷವನ್ನು ಉಳಿಸಿದೆ ಎನ್ನುತ್ತಾರೆ ಇತಿಹಾಸ ಆಸಕ್ತರು.</p>.<div><blockquote>ಮುಜರಾಯಿ ಇಲಾಖೆಗೆ ಸೇರದ್ದರಿಂದ ಸರ್ಕಾರದ ಅನುದಾನ ದೊರಕಿಲ್ಲ. ಸಮಾಜದವರೆಲ್ಲ ಸೇರಿ ಜೀರ್ಣೋದ್ದಾರ ಮಾಡಿಸಿದ್ದೇವೆ. ದೇವಾಲಯದಲ್ಲಿ ಪೂಜೆ ನಡೆಸುತ್ತಿದ್ದೇವೆ</blockquote><span class="attribution">ಎಚ್.ಎಂ.ಗಂಗಾಧರ ಕುಂಬಾರ ಸಮಾಜ ಅಧ್ಯಕ್ಷ</span></div>.<div><blockquote>ದೇವಾಲಯ ಪಾಳು ಬೀಳದಂತೆ ಕುಂಬಾರ ಸಮಾಜದಿಂದ ಸಂರಕ್ಷಿಸಲಾಗಿದೆ. ದೇವಾಲಯ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಮಾರ್ಪಟ್ಟಿದೆ</blockquote><span class="attribution"> ಮಾದಪ್ಪ ಶೆಟ್ಟಿ ಕುಂಬಳೇಶ್ವರ ದೇವಾಲಯ ಅರ್ಚಕ</span></div>.<p><strong>ಕುಂಬಾರ ಕೇರಿಯಲ್ಲಿದೆ ಹಳೇಬೀಡು ಹೊಯ್ಸಳರ ಕಾಲದಲ್ಲಿ ಮಣ್ಣಿನ ಮಡಿಕೆ</strong> </p><p>ಕುಂಬಾರರ ಕಸುಬು ಪ್ರಮುಖ ಉದ್ದಿಮೆಯಾಗಿತ್ತು. ಅಂದಿನ ಕಾಲದ ಜೀವನಕ್ಕೆ ಮಣ್ಣಿನ ಪಾತ್ರೆಗಳ ಅಗತ್ಯ ಹೆಚ್ಚಾಗಿತ್ತು. ಹೊಯ್ಸಳರ ನಾಡಿನ ಕುಂಬಾರ ಕೇರಿ ವಿಸ್ತಾರವಾಗಿತ್ತು. ಹೀಗಾಗಿ ಕುಂಬಾರರ ಕುಲದೇವರ ದೇವಾಲಯವನ್ನು ರಾಜರೇ ನಿರ್ಮಿಸಿರಬಹುದು ಎನ್ನುತ್ತಾರೆ ಕುಂಬಾರ ಸಮಾಜ ಅಧ್ಯಕ್ಷ ಎಚ್.ಎಂ.ಗಂಗಾಧರ. </p><p>ಲಕ್ಕಣ್ಣ ವೀರಣ್ಣ ಎಂಬ ಯೋಧರು 3ನೇ ವೀರಬಲ್ಲಾಳನ ಸಹೋದರಿ ಬಲ್ಲಾಳ ದೇವಿಯ ಅವಳಿ ಮಕ್ಕಳು. ಬಲ್ಲಾಳನಿಗೂ ಸಹೋದರಿಗೂ ಯಾವುದೋ ಕಾರಣಕ್ಕೆ ಸಂಪರ್ಕ ಇಲ್ಲದಂತಾಗಿರುತ್ತದೆ. ಒಮ್ಮೆ ಲಕ್ಕಣ್ಣ ವೀರಣ್ಣ ಹೊಯ್ಸಳ ಸಾಮ್ರಾಜ್ಯ ನೋಡಲು ಬರುತ್ತಾರೆ. ಬಲ್ಲಾಳನ ಪ್ರೇಯಸಿ ಲಕ್ಕಣ್ಣ ವೀರಣ್ಣ ರೊಂದಿಗೆ ಸಂಘರ್ಷ ನಡೆಸಿ ಅವರ ವಿರುದ್ಧ ರಾಜನಿಗೆ ಇಲ್ಲದ ದೂರು ಹೇಳುತ್ತಾಳೆ. ಪ್ರೇಯಸಿಯ ಮಾತು ಕೇಳಿದ ರಾಜ ಸಹೋದರರನ್ನು ಗಲ್ಲಿಗೇರಿಸಿ ಅವರ ತಾಯಿಗೆ ಅನ್ನ ನೀರು ಕೊಡಬೇಡಿ ಎಂದು ರಾಜಾಜ್ಞೆ ನೀಡುತ್ತಾನೆ. ಮಕ್ಕಳಿಗೆ ಗಲ್ಲು ಶಿಕ್ಷೆ ವಿಧಿಸಿರುವ ವಿಚಾರ ತಿಳಿದು ಬಲ್ಲಾಳ ದೇವಿ ರಾಜಧಾನಿ ದ್ವಾರಸಮುದ್ರಕ್ಕೆ ಓಡೋಡಿ ಬರುತ್ತಾಳೆ. ಪರಿಪರಿಯಾಗಿ ಬೇಡಿಕೊಂಡರೂ ರಾಜನ ಸೇವಕರು ಮಾತು ಕೇಳದೇ ತಳ್ಳುತ್ತಾರೆ. ರಾಜಧಾನಿಯಲ್ಲಿ ಯಾರೊಬ್ಬರು ಅನ್ನ ನೀರು ಕೊಡುವುದಿಲ್ಲ. ನಿತ್ರಾಣಳಾಗಿದ್ದ ಬಲ್ಲಾಳದೇವಿ ಕುಂಬಾರ ಕೇರಿಗೆ ಬಂದು. ಕುಸಿದು ಬೀಳುತ್ತಾಳೆ. ಮಡಿಕೆ ತಯಾರಿಸುತ್ತಿದ್ದ ಕುಂಬಾರರು ಅವಳಿಗೆ ಮಡಿಕೆಯಲ್ಲಿದ್ದ ನೀರು ಕೊಡುತ್ತಾರೆ. ಸ್ವಲ್ಪ ಚೇತರಿಕೆಯಾದಾಗ ಹೊಯ್ಸಳ ಸಾಮ್ರಾಜ್ಯ ಹಾಳಾಗಲಿ ಕುಂಬಾರ ಕೇರಿ ಊರಾಗಲಿ ಎಂದು ಶಾಪ ಕೊಟ್ಟು ಪ್ರಾಣ ಬಿಡುತ್ತಾಳೆ. ದ್ವಾರಸಮುದ್ರ ಈಗ ಕುಂಬಾರಕೇರಿಯಲ್ಲಿದೆ. ಹಳೇಬೀಡು ಎಂಬ ಊರಾಗಿ ಬೆಳೆದಿದೆ ಎಂಬುದು ಜನಪದ ಕಥೆಗಳಲ್ಲಿದೆ. ಅಂದಿನ ಕುಂಬಾರ ಕೇರಿಯಲ್ಲಿ ಕುಂಬಳೇಶ್ವರ ದೇವಾಲಯ ಇದೆ ಎನ್ನುತ್ತಾರೆ ಸ್ಥಳೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು:</strong> ಕುಂಬಾರ ಸಮಾಜದ ಕುಲದೈವ ಕುಂಬಳೇಶ್ವರ ದೇವಾಲಯ, ಹೊಯ್ಸಳ ಶೈಲಿಯ ವಾಸ್ತುಶಿಲ್ಪದೊಂದಿಗೆ ವಿಶಿಷ್ಟವಾಗಿದೆ. ಹಳೇಬೀಡಿನ ಬ್ರಾಹ್ಮಣ ಬೀದಿ ಸಮೀಪದಲ್ಲಿರುವ ಕುಂಬಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ ವೈಭವದಿಂದ ನಡೆಯುತ್ತದೆ. </p>.<p>ನೂರಾರು ವರ್ಷ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದ್ದ ದೇವಾಲಯವನ್ನು ಸ್ಥಳೀಯ ಕುಂಬಾರ ಸಮಾಜ 19 ವರ್ಷದ ಹಿಂದೆ ಜೀರ್ಣೋದ್ಧಾರ ಮಾಡಿಸಿ, ನಿತ್ಯ ಪೂಜೆ, ಹುಣ್ಣಿಮೆ ಕಟ್ಟಳೆ, ಶಿವರಾತ್ರಿ ವಿಶೇಷ ಪೂಜೆ, ಜಾಗರಣೆ ನಡೆಸುತ್ತಿದೆ. ಹಳೇಬೀಡಿನಲ್ಲಿ ಕೇವಲ 15 ಕುಟುಂಬ ನೆಲೆಸಿದ್ದರೂ, ದೇವಾಲಯ ಉಳಿಸಿದ್ದಾರೆ.</p>.<p>ಶತ್ರುಗಳ ದಾಳಿಯಿಂದ ಹೊಯ್ಸಳರ ನಾಡಿನ ಶಿಲ್ಪಕಲಾ ದೇವಾಲಯಗಳು ಭಗ್ನಗೊಂಡಿದ್ದವು. ಹೊಯ್ಸಳರ ಸಾಮ್ರಾಜ್ಯದ ಅವನತಿಯ ನಂತರ ಸಾಕಷ್ಟು ದೇವಾಲಯಗಳು ನಿರ್ವಹಣೆ ಇಲ್ಲದೇ ಸೊರಗಿದವು. ಕುಂಬಳೇಶ್ವರ ದೇವಾಲಯವೂ ನಿರ್ವಹಣೆ ಇಲ್ಲದೇ ಸೊರಗಿತ್ತು. ಕುಂಬಾರ ಸಮಾಜ ಹಲವಾರು ಬಾರಿ ದೇವಾಲಯ ಜೀರ್ಣೋದ್ಧಾರ ಮಾಡುವ ಪ್ರಯತ್ನ ನಡೆಸಿದರೂ ಕಾರ್ಯಗತವಾಗಲಿಲ್ಲ. 1925 ರಲ್ಲಿ ಮಾದಪ್ಪಶೆಟ್ಟಿ ಎಂಬುವವರು ಸಮಾಜವನ್ನು ಒಗ್ಗೂಡಿಸಿ ಜೀರ್ಣೋದ್ಧಾರಕ್ಕೆ ಕೈಹಾಕಿದ್ದರು. ಕುಟುಂಬಕ್ಕೆ ₹1ರಂತೆ ಹಣ ಸಂಗ್ರಹಿಸುವ ನಿರ್ಣಯ ಕೈಗೊಂಡಿದ್ದರು ಎಂಬುದಕ್ಕೆ ದಾಖಲೆಗಳು ದೊರೆತಿವೆ ಎಂದು ಸಮಾಜದ ಜಗದೀಶ ಹೇಳುತ್ತಾರೆ.</p>.<p>ಸ್ಥಳೀಯ ಕುಂಬಾರರು ಒಗ್ಗೂಡಿ 2005 ರಲ್ಲಿ ಹೊಸದಾಗಿ ಸಮಿತಿ ರಚನೆ ಮಾಡಿಕೊಂಡು ದೇವಾಲಯ ಜೀರ್ಣೋದ್ಧಾರ ಮಾಡಿಸಿದರು. ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕುಂಬಾರ ಗುಂಡಯ್ಯ ಶಿವಶರಣ ಅವರ ಸಾನಿಧ್ಯದಲ್ಲಿ ದೇವಾಲಯದ ಸಂಪ್ರೋಕ್ಷಣೆ ಮಾಡಲಾಗಿದೆ. ಅಂದಿನಿಂದ ಸ್ಥಳೀಯ ಕುಂಬಾರ ಸಮಾಜ ದೇವಾಲಯದ ಪೂಜೆ ಹಾಗೂ ನಿರ್ವಹಣೆ ನೋಡಿಕೊಳ್ಳುತ್ತಿದೆ ಎನ್ನುತ್ತಾರೆ ಸ್ಥಳೀಯರು.</p>.<p>ದೇವಾಲಯ ಗರ್ಭಗುಡಿ, ಸುಖನಾಸಿ, ವಿಶಾಲವಾದ ನವರಂಗ ಹಾಗೂ ಮುಖ ಮಂಟಪ ಹೊಂದಿದೆ. ಮುಖಮಂಟಪದಲ್ಲಿ ಭಕ್ತರು, ದೇವಾಲಯದ ಆಗು ಹೋಗುಗಳ ಬಗ್ಗೆ ಸಮಾಲೋಚನೆ ನಡೆಸಲು ಅನುಕೂಲವಾಗಿದೆ.</p>.<p>ಮೂಲ ಸ್ವರೂಪ ಉಳಿಸಿಕೊಂಡು ದುರಸ್ತಿ ಮಾಡಿರುವ ದೇವಾಲಯದಲ್ಲಿ ಕಂಬಗಳು ಆಕರ್ಷಣೀಯವಾಗಿವೆ. ಕಂಬಗಳಲ್ಲಿ ನಾಜೂಕಾದ ಸೂಕ್ಷ್ಮ ಕೆತ್ತನೆಯ ವಿಗ್ರಹ ಮೂಡಿಸಲಾಗಿದೆ. ನೂರಾರು ವರ್ಷ ದೇವಾಲಯ ಪಾಳು ಬಿದ್ದ ಸ್ಥಿತಿಯಲ್ಲಿದ್ದರೂ, ಗರ್ಭಗುಡಿಯ ಲಿಂಗ, ಮುಖ ಮಂಟಪಕ್ಕೆ ಹೊಂದಿಕೊಂಡಿರುವ ಗೋಡೆಯ ಮೇಲಿರುವ ಗಣೇಶ ಮೂರ್ತಿ ಅಚ್ಚಳಿಯದಂತೆ ಉಳಿದಿವೆ.</p>.<p>ಗರ್ಭಗುಡಿಯ ಲಿಂಗ ಹಾಗೂ ಗಣೇಶ ಮೂರ್ತಿಗೆ ನಿತ್ಯಪೂಜೆ ಹಾಗೂ ವಿಶೇಷ ಪೂಜೆ ನಡೆಯುತ್ತಿದೆ. ಕಂಬಗಳು ಮೇಲಿನ ಕಲಾಕೃತಿ, ದೇವತೆಗಳ ವಿಗ್ರಹ ಆಕರ್ಷಣೀಯವಾಗಿವೆ. ದೇವಾಲಯಕ್ಕೆ ಉಂಬಳಿ ಬಿಟ್ಟಿರುವ ದಾಖಲೆ ಸಿಕ್ಕಿಲ್ಲ. ಹೀಗಾಗಿ ದೇಗುಲ ಮುಜಾರಾಯಿ ಇಲಾಖೆಗೆ ಸೇರಿಲ್ಲ. ದೇವಾಲಯಕ್ಕೆ ಸಂಬಂಧಿಸಿದ ಶಾಸನ ಮಾಹಿತಿ ದೊರಕಿಲ್ಲ. ಹೀಗಾಗಿ ಪುರಾತತ್ವ ಇಲಾಖೆಯ ಸಂರಕ್ಷಣೆಗೂ ಒಳಪಟ್ಟಿಲ್ಲ. ಕುಲದೇವರ ಮೇಲಿನ ನಂಬಿಕೆಯಿಂದ ಕುಂಬಾರ ಸಮಾಜ ಪ್ರಾಚೀನ ಕಲೆ, ಸಂಸ್ಕೃತಿ ಹಾಗೂ ಇತಿಹಾಸದ ಅವಶೇಷವನ್ನು ಉಳಿಸಿದೆ ಎನ್ನುತ್ತಾರೆ ಇತಿಹಾಸ ಆಸಕ್ತರು.</p>.<div><blockquote>ಮುಜರಾಯಿ ಇಲಾಖೆಗೆ ಸೇರದ್ದರಿಂದ ಸರ್ಕಾರದ ಅನುದಾನ ದೊರಕಿಲ್ಲ. ಸಮಾಜದವರೆಲ್ಲ ಸೇರಿ ಜೀರ್ಣೋದ್ದಾರ ಮಾಡಿಸಿದ್ದೇವೆ. ದೇವಾಲಯದಲ್ಲಿ ಪೂಜೆ ನಡೆಸುತ್ತಿದ್ದೇವೆ</blockquote><span class="attribution">ಎಚ್.ಎಂ.ಗಂಗಾಧರ ಕುಂಬಾರ ಸಮಾಜ ಅಧ್ಯಕ್ಷ</span></div>.<div><blockquote>ದೇವಾಲಯ ಪಾಳು ಬೀಳದಂತೆ ಕುಂಬಾರ ಸಮಾಜದಿಂದ ಸಂರಕ್ಷಿಸಲಾಗಿದೆ. ದೇವಾಲಯ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಮಾರ್ಪಟ್ಟಿದೆ</blockquote><span class="attribution"> ಮಾದಪ್ಪ ಶೆಟ್ಟಿ ಕುಂಬಳೇಶ್ವರ ದೇವಾಲಯ ಅರ್ಚಕ</span></div>.<p><strong>ಕುಂಬಾರ ಕೇರಿಯಲ್ಲಿದೆ ಹಳೇಬೀಡು ಹೊಯ್ಸಳರ ಕಾಲದಲ್ಲಿ ಮಣ್ಣಿನ ಮಡಿಕೆ</strong> </p><p>ಕುಂಬಾರರ ಕಸುಬು ಪ್ರಮುಖ ಉದ್ದಿಮೆಯಾಗಿತ್ತು. ಅಂದಿನ ಕಾಲದ ಜೀವನಕ್ಕೆ ಮಣ್ಣಿನ ಪಾತ್ರೆಗಳ ಅಗತ್ಯ ಹೆಚ್ಚಾಗಿತ್ತು. ಹೊಯ್ಸಳರ ನಾಡಿನ ಕುಂಬಾರ ಕೇರಿ ವಿಸ್ತಾರವಾಗಿತ್ತು. ಹೀಗಾಗಿ ಕುಂಬಾರರ ಕುಲದೇವರ ದೇವಾಲಯವನ್ನು ರಾಜರೇ ನಿರ್ಮಿಸಿರಬಹುದು ಎನ್ನುತ್ತಾರೆ ಕುಂಬಾರ ಸಮಾಜ ಅಧ್ಯಕ್ಷ ಎಚ್.ಎಂ.ಗಂಗಾಧರ. </p><p>ಲಕ್ಕಣ್ಣ ವೀರಣ್ಣ ಎಂಬ ಯೋಧರು 3ನೇ ವೀರಬಲ್ಲಾಳನ ಸಹೋದರಿ ಬಲ್ಲಾಳ ದೇವಿಯ ಅವಳಿ ಮಕ್ಕಳು. ಬಲ್ಲಾಳನಿಗೂ ಸಹೋದರಿಗೂ ಯಾವುದೋ ಕಾರಣಕ್ಕೆ ಸಂಪರ್ಕ ಇಲ್ಲದಂತಾಗಿರುತ್ತದೆ. ಒಮ್ಮೆ ಲಕ್ಕಣ್ಣ ವೀರಣ್ಣ ಹೊಯ್ಸಳ ಸಾಮ್ರಾಜ್ಯ ನೋಡಲು ಬರುತ್ತಾರೆ. ಬಲ್ಲಾಳನ ಪ್ರೇಯಸಿ ಲಕ್ಕಣ್ಣ ವೀರಣ್ಣ ರೊಂದಿಗೆ ಸಂಘರ್ಷ ನಡೆಸಿ ಅವರ ವಿರುದ್ಧ ರಾಜನಿಗೆ ಇಲ್ಲದ ದೂರು ಹೇಳುತ್ತಾಳೆ. ಪ್ರೇಯಸಿಯ ಮಾತು ಕೇಳಿದ ರಾಜ ಸಹೋದರರನ್ನು ಗಲ್ಲಿಗೇರಿಸಿ ಅವರ ತಾಯಿಗೆ ಅನ್ನ ನೀರು ಕೊಡಬೇಡಿ ಎಂದು ರಾಜಾಜ್ಞೆ ನೀಡುತ್ತಾನೆ. ಮಕ್ಕಳಿಗೆ ಗಲ್ಲು ಶಿಕ್ಷೆ ವಿಧಿಸಿರುವ ವಿಚಾರ ತಿಳಿದು ಬಲ್ಲಾಳ ದೇವಿ ರಾಜಧಾನಿ ದ್ವಾರಸಮುದ್ರಕ್ಕೆ ಓಡೋಡಿ ಬರುತ್ತಾಳೆ. ಪರಿಪರಿಯಾಗಿ ಬೇಡಿಕೊಂಡರೂ ರಾಜನ ಸೇವಕರು ಮಾತು ಕೇಳದೇ ತಳ್ಳುತ್ತಾರೆ. ರಾಜಧಾನಿಯಲ್ಲಿ ಯಾರೊಬ್ಬರು ಅನ್ನ ನೀರು ಕೊಡುವುದಿಲ್ಲ. ನಿತ್ರಾಣಳಾಗಿದ್ದ ಬಲ್ಲಾಳದೇವಿ ಕುಂಬಾರ ಕೇರಿಗೆ ಬಂದು. ಕುಸಿದು ಬೀಳುತ್ತಾಳೆ. ಮಡಿಕೆ ತಯಾರಿಸುತ್ತಿದ್ದ ಕುಂಬಾರರು ಅವಳಿಗೆ ಮಡಿಕೆಯಲ್ಲಿದ್ದ ನೀರು ಕೊಡುತ್ತಾರೆ. ಸ್ವಲ್ಪ ಚೇತರಿಕೆಯಾದಾಗ ಹೊಯ್ಸಳ ಸಾಮ್ರಾಜ್ಯ ಹಾಳಾಗಲಿ ಕುಂಬಾರ ಕೇರಿ ಊರಾಗಲಿ ಎಂದು ಶಾಪ ಕೊಟ್ಟು ಪ್ರಾಣ ಬಿಡುತ್ತಾಳೆ. ದ್ವಾರಸಮುದ್ರ ಈಗ ಕುಂಬಾರಕೇರಿಯಲ್ಲಿದೆ. ಹಳೇಬೀಡು ಎಂಬ ಊರಾಗಿ ಬೆಳೆದಿದೆ ಎಂಬುದು ಜನಪದ ಕಥೆಗಳಲ್ಲಿದೆ. ಅಂದಿನ ಕುಂಬಾರ ಕೇರಿಯಲ್ಲಿ ಕುಂಬಳೇಶ್ವರ ದೇವಾಲಯ ಇದೆ ಎನ್ನುತ್ತಾರೆ ಸ್ಥಳೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>