2014 ರ ಆಗಸ್ಟ್ 14 ರಂದು ರಾತ್ರಿ ಸುಮಾರು 11.30 ಕ್ಕೆ ಪದ್ಮಾವತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನರ್ಸಿಂಗ್ ಹೋಂನಲ್ಲಿ ದಾಖಲಿಸಿಕೊಂಡು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸಾಮಾನ್ಯ ಹೆರಿಗೆ ಆಗುವುದಾಗಿ ಭರವಸೆ ನೀಡಿದ್ದರು. ಆದರೆ ಪದ್ಮಾವತಿ ಅವರು ಹೆರಿಗೆ ನೋವು ತಡೆಯಲು ಸಾಧ್ಯವಾಗದೇ ಇದ್ದಾಗ ಸಿಜೆರಿಯನ್ ಮಾಡಲು ಕೇಳಿಕೊಂಡರು. ಆದರೂ ವೈದ್ಯರು, ಅವರ ಮಾತನ್ನು ಕೇಳದೇ, ಸಾಮಾನ್ಯ ಹೆರಿಗೆ ಮಾಡಿಸಿದರು. ಈ ಸಂದರ್ಭದಲ್ಲಿ ಮಗುವಿನ ಕತ್ತು ಮತ್ತು ಬಲಗೈ ಅನ್ನು ಬಲವಾಗಿ ಎಳೆದ ಕಾರಣ, ಮಗುವಿನ ಬಲಗೈ ನರಗಳು ಕುತ್ತಿಗೆಯ ಭಾಗದಿಂದ ಕಿತ್ತು ಬಂದಿದ್ದು, ಮಗು ತನ್ನ ಬಲಗೈ ಸ್ವಾಧೀನ ಕಳೆದುಕೊಂಡಿತ್ತು.