<p><strong>ವರದಿ: ಎಚ್.ವಿ. ಸುರೇಶ್ಕುಮಾರ್</strong></p><p><strong>ಹೊಳೆನರಸೀಪುರ:</strong> ಪಟ್ಟಣದ ಸೀತಾವಿಲಾಸ ರಸ್ತೆ, ಕಾಳಿಕಾಂಬ ದೇವಾಲಯ ರಸ್ತೆ, ಹಾಸನ ರಸ್ತೆಯ ಪುರಸಭೆ ಕೋಳಿ ಅಂಗಡಿ ವಾಣಿಜ್ಯ ಸಂಕೀರ್ಣದ ಎದುರು ದೊಡ್ಡ ಗುಂಡಿಗಳು ಬಿದ್ದಿದ್ದು, ಪಟ್ಟಣದ ಜನರು ಓಡಾಡುವುದಕ್ಕೂ ತೊಂದರೆ ಅನುಭವಿಸುವಂತಾಗಿದೆ.</p><p>ಪಟ್ಟಣದಲ್ಲಿ ಶುದ್ದ ಕುಡಿಯುವ ನೀರು ಒದಗಿಸಲು ಸೀತಾವಿಲಾಸ ರಸ್ತೆ ಹಾಗೂ ಕಾಳಿಕಾಂಬ ದೇವಾಲಯ ರಸ್ತೆಯಲ್ಲಿ, ಆ ಕಡೆಯಿಂದ ಈ ಕಡೆಯವರೆಗೆ ಪೈಪ್ ಅಳವಡಿಸಲು ಅಗೆದು ಹಾಕಲಾಗಿತ್ತು. ಪೈಪ್ಲೈನ್ ಅಳವಡಿಸಿ ಮುಚ್ಚದ ಕಾರಣ ರಸ್ತೆ ಪೂರ್ತಿ ಗುಂಡಿಮಯವಾಗಿದೆ.</p><p>ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಗುಂಡಿ ಬಿದ್ದ ದಿನದಿಂದ ಈ ರಸ್ತೆಯಲ್ಲಿ ಬೈಕ್ಗಳಲ್ಲಿ ಓಡಾಡುವ ಅನೇಕರಿಗೆ ಬೆನ್ನುಹುರಿ ಸಮಸ್ಯೆ ಪ್ರಾರಂಭವಾಗಿದೆ. ಸಾರ್ವಜನಿಕರು ಓಡಾಡಲೂ ಕಷ್ಟವಾಗಿದೆ.</p><p>‘ಈ ಬಗ್ಗೆ ಹಿಂದಿನ ಮುಖ್ಯಾಧಿಕಾರಿ ಶಾಂತಲಾ ಅವರಿಗೆ ವಿವರಿಸಿದ್ದರೂ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಬಂದಿರುವ ಮುಖ್ಯಾಧಿಕಾರಿ ಮಹೇಂದ್ರ ಅವರಿಗೂ ಮನವಿ ಸಲ್ಲಿಸಿದ್ದು, ಸೀತಾವಿಲಾಸ ರಸ್ತೆ ಹಾಗೂ ಕಾಳಿಕಾಂಬ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಆಗ್ರಹಿಸಲಾಗಿದೆ’ ಎಂದು ಜನಸ್ಪಂದನ ವೇದಿಕೆಯ ಸುರೇಶ್ ತಿಳಿಸಿದ್ದಾರೆ.</p><p>‘2 ತಿಂಗಳು ಕಳೆಯುತ್ತಾ ಬಂದಿದೆ. ಆದರೆ ರಸ್ತೆ ಮಾತ್ರ ದುರಸ್ತಿ ಆಗಿಲ್ಲ. ಇದರಿಂದ ಬಡಾವಣೆಯ ಜನರು ತೊಂದರೆ ಅನುಭವಿಸುತ್ತಿದ್ದು, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಹಾಕಲು ಸಿದ್ದತೆ ನಡೆಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.</p><p>‘ಪುರಸಭೆಯಲ್ಲಿ ರಸ್ತೆ ದುರಸ್ತಿಗೆ ಹಣ ಇಲ್ಲ. ಆದರೆ ಮೇಲಿಂದ ಮೇಲೆ ಪುರಸಭೆಯವರು ಅಗತ್ಯ ಇಲ್ಲದ ಕೆಲಸಗಳನ್ನು ಮಾಡಿಸಲು ಲಕ್ಷಾಂತರ ಹಣ ವೆಚ್ಚ ಮಾಡುತ್ತಾರೆ’ ಎಂದು ಪುರಸಭೆ ಆಡಳಿತ ಪಕ್ಷದ ಸದಸ್ಯರೊಬ್ಬರು ದೂರಿದರು.</p><p>‘ಗಾಂಧೀವೃತ್ತದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಡಿಜಿಟಲ್ ಜಾಹೀರಾತು ಫಲಕ ಹಾಕಿದ್ದಾರೆ. 1 ತಿಂಗಳಲ್ಲೇ ಅದು ಕೆಟ್ಟು ಹೋಗಿದೆ. ಪುರಸಭೆಯ ವಾಣಿಜ್ಯ ಸಂಕೀರ್ಣದಲ್ಲಿ ಅನೇಕ ವರ್ಷಗಳಿಂದ ಮಳಿಗೆಗಳು ಖಾಲಿ ಬಿದ್ದಿದೆ. ಮತ್ತೆ ಮತ್ತೆ ಮಳಿಗೆಗಳನ್ನು ಕಟ್ಟಿ ಸಾರ್ವಜನಿಕ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ’ ಎಂದು<br>ದೂರಿದ್ದಾರೆ.</p><p>ಈ ಬಗ್ಗೆ ಶಾಸಕ ರೇವಣ್ಣ ಅವರ ಗಮನಕ್ಕೆ ತರಲಾಗಿದ್ದು, ತಕ್ಷಣ ಡಾಂಬರ್ ಹಾಕಿಸಿ ಎಂದು ಸೂಚಿಸಿದ್ದರು. ಆದರೆ ಕೆಲಸ ಇನ್ನೂ ಪ್ರಾರಂಭ ಆಗಿಲ್ಲ ಎನ್ನುವುದು ಜನರ ದೂರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವರದಿ: ಎಚ್.ವಿ. ಸುರೇಶ್ಕುಮಾರ್</strong></p><p><strong>ಹೊಳೆನರಸೀಪುರ:</strong> ಪಟ್ಟಣದ ಸೀತಾವಿಲಾಸ ರಸ್ತೆ, ಕಾಳಿಕಾಂಬ ದೇವಾಲಯ ರಸ್ತೆ, ಹಾಸನ ರಸ್ತೆಯ ಪುರಸಭೆ ಕೋಳಿ ಅಂಗಡಿ ವಾಣಿಜ್ಯ ಸಂಕೀರ್ಣದ ಎದುರು ದೊಡ್ಡ ಗುಂಡಿಗಳು ಬಿದ್ದಿದ್ದು, ಪಟ್ಟಣದ ಜನರು ಓಡಾಡುವುದಕ್ಕೂ ತೊಂದರೆ ಅನುಭವಿಸುವಂತಾಗಿದೆ.</p><p>ಪಟ್ಟಣದಲ್ಲಿ ಶುದ್ದ ಕುಡಿಯುವ ನೀರು ಒದಗಿಸಲು ಸೀತಾವಿಲಾಸ ರಸ್ತೆ ಹಾಗೂ ಕಾಳಿಕಾಂಬ ದೇವಾಲಯ ರಸ್ತೆಯಲ್ಲಿ, ಆ ಕಡೆಯಿಂದ ಈ ಕಡೆಯವರೆಗೆ ಪೈಪ್ ಅಳವಡಿಸಲು ಅಗೆದು ಹಾಕಲಾಗಿತ್ತು. ಪೈಪ್ಲೈನ್ ಅಳವಡಿಸಿ ಮುಚ್ಚದ ಕಾರಣ ರಸ್ತೆ ಪೂರ್ತಿ ಗುಂಡಿಮಯವಾಗಿದೆ.</p><p>ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಗುಂಡಿ ಬಿದ್ದ ದಿನದಿಂದ ಈ ರಸ್ತೆಯಲ್ಲಿ ಬೈಕ್ಗಳಲ್ಲಿ ಓಡಾಡುವ ಅನೇಕರಿಗೆ ಬೆನ್ನುಹುರಿ ಸಮಸ್ಯೆ ಪ್ರಾರಂಭವಾಗಿದೆ. ಸಾರ್ವಜನಿಕರು ಓಡಾಡಲೂ ಕಷ್ಟವಾಗಿದೆ.</p><p>‘ಈ ಬಗ್ಗೆ ಹಿಂದಿನ ಮುಖ್ಯಾಧಿಕಾರಿ ಶಾಂತಲಾ ಅವರಿಗೆ ವಿವರಿಸಿದ್ದರೂ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಬಂದಿರುವ ಮುಖ್ಯಾಧಿಕಾರಿ ಮಹೇಂದ್ರ ಅವರಿಗೂ ಮನವಿ ಸಲ್ಲಿಸಿದ್ದು, ಸೀತಾವಿಲಾಸ ರಸ್ತೆ ಹಾಗೂ ಕಾಳಿಕಾಂಬ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಆಗ್ರಹಿಸಲಾಗಿದೆ’ ಎಂದು ಜನಸ್ಪಂದನ ವೇದಿಕೆಯ ಸುರೇಶ್ ತಿಳಿಸಿದ್ದಾರೆ.</p><p>‘2 ತಿಂಗಳು ಕಳೆಯುತ್ತಾ ಬಂದಿದೆ. ಆದರೆ ರಸ್ತೆ ಮಾತ್ರ ದುರಸ್ತಿ ಆಗಿಲ್ಲ. ಇದರಿಂದ ಬಡಾವಣೆಯ ಜನರು ತೊಂದರೆ ಅನುಭವಿಸುತ್ತಿದ್ದು, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಹಾಕಲು ಸಿದ್ದತೆ ನಡೆಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.</p><p>‘ಪುರಸಭೆಯಲ್ಲಿ ರಸ್ತೆ ದುರಸ್ತಿಗೆ ಹಣ ಇಲ್ಲ. ಆದರೆ ಮೇಲಿಂದ ಮೇಲೆ ಪುರಸಭೆಯವರು ಅಗತ್ಯ ಇಲ್ಲದ ಕೆಲಸಗಳನ್ನು ಮಾಡಿಸಲು ಲಕ್ಷಾಂತರ ಹಣ ವೆಚ್ಚ ಮಾಡುತ್ತಾರೆ’ ಎಂದು ಪುರಸಭೆ ಆಡಳಿತ ಪಕ್ಷದ ಸದಸ್ಯರೊಬ್ಬರು ದೂರಿದರು.</p><p>‘ಗಾಂಧೀವೃತ್ತದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಡಿಜಿಟಲ್ ಜಾಹೀರಾತು ಫಲಕ ಹಾಕಿದ್ದಾರೆ. 1 ತಿಂಗಳಲ್ಲೇ ಅದು ಕೆಟ್ಟು ಹೋಗಿದೆ. ಪುರಸಭೆಯ ವಾಣಿಜ್ಯ ಸಂಕೀರ್ಣದಲ್ಲಿ ಅನೇಕ ವರ್ಷಗಳಿಂದ ಮಳಿಗೆಗಳು ಖಾಲಿ ಬಿದ್ದಿದೆ. ಮತ್ತೆ ಮತ್ತೆ ಮಳಿಗೆಗಳನ್ನು ಕಟ್ಟಿ ಸಾರ್ವಜನಿಕ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ’ ಎಂದು<br>ದೂರಿದ್ದಾರೆ.</p><p>ಈ ಬಗ್ಗೆ ಶಾಸಕ ರೇವಣ್ಣ ಅವರ ಗಮನಕ್ಕೆ ತರಲಾಗಿದ್ದು, ತಕ್ಷಣ ಡಾಂಬರ್ ಹಾಕಿಸಿ ಎಂದು ಸೂಚಿಸಿದ್ದರು. ಆದರೆ ಕೆಲಸ ಇನ್ನೂ ಪ್ರಾರಂಭ ಆಗಿಲ್ಲ ಎನ್ನುವುದು ಜನರ ದೂರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>