ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ದಿನವೂ ಗುಣಮುಖರ ಸಂಖ್ಯೆ ಏರಿಕೆ

Last Updated 20 ಮೇ 2021, 12:59 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಹೊಸಪ್ರಕರಣಗಳಿಗಿಂತ ಚೇತರಿಕೆ ಹೊಂದಿದವರ ಸಂಖ್ಯೆ ಹೆಚ್ಚಿದ್ದು,ಸೋಂಕಿತರು ಹಾಗೂಮರಣ ಪ್ರಮಾಣ ದರತುಸು ತಗ್ಗಿದೆ.

ಹೊಸದಾಗಿ ಗುರುವಾರ 897 ಕೋವಿಡ್‌ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ 16
ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ68861ಕ್ಕೆ ಏರಿಕೆಯಾಗಿದೆ. ಈ ಪೈಕಿ 54845 ಮಂದಿ
ಗುಣಮುಖರಾಗಿದ್ದಾರೆ.

1570 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 13,133
ಸಕ್ರಿಯ ಪ್ರಕರಣಗಳ ಪೈಕಿ 131 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆಯಿಂದಈವರೆಗೆ ಮೃತಪಟ್ಟವರ ಸಂಖ್ಯೆ 883.

ಹೊಸದಾಗಿ ಆಲೂರು ತಾಲ್ಲೂಕಿನ 39,ಅರಕಲಗೂಡು 127, ಅರಸೀಕೆರೆ 87,ಬೇಲೂರು 67, ಚನ್ನರಾಯಪಟ್ಟಣ 92,ಹಾಸನ 313, ಹೊಳೆನರಸೀಪುರ 116, ಸಕಲೇಶಪುರ 50 ಹಾಗೂ ಇತರೆ ಜಿಲ್ಲೆಯ ಆರು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಹಾಸನ ತಾಲ್ಲೂಕಿನ 9, ಚನ್ನರಾಯಪಟ್ಟಣ 3, ಆಲೂರು 2, ಅರಕಲಗೂಡು, ಅರಸೀಕೆರೆಯ ತಲಾ ಒಬ್ಬರುಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT