ಹಾಸನ: ಹೇಮಾವತಿ ಜಲಾಶಯದಿಂದ ತಮಿಳು ನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ, ನಾಲೆಗಳಿಗೆ ಹರಿಸಿ ಎಂದು ಪ್ರತಿಭಟನೆ ನಡೆಸಿ ಡ್ಯಾಂ ಒಳ ಪ್ರವೇಶಿಸಿ ಮುತ್ತಿಗೆ ಹಾಕಲು ಯತ್ನಿಸಿದ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
"ಕೃಷಿಗೆ ನೀರು ಕೇಳುತ್ತಿಲ್ಲ, ಜನ-ಜಾನುವಾರು ಕುಡಿಯಲು ನೀರು ಹರಿಸಿ ಎಂದು ಅನೇಕ ಸಲ ಮನವಿ ಮಾಡಿದ್ದರೂ, ಯಾರೊಬ್ಬರೂ ಸ್ಪಂದಿಸಿಲ್ಲ' ಎಂದು ಪ್ರತಿಭಟನಾಕಾರರು ಆರೋಪಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಇನ್ನಾದರೂ ನಮ್ಮನ್ನು ಸಾಯಿಸಿ, ಪ್ರಾಧಿಕಾರದ ಆದೇಶ ಪಾಲನೆಗೆ ಮುಂದಾದರೆ ಹೋರಾಟ ತೀವ್ರಗೊಳಿಸಲಾಗುವುದು. ನದಿಗೆ ನೀರು ಹರಿಸುವುದನ್ನು ನಿಲ್ಲಿಸಿ, ಅದೇ ನೀರನ್ನು ಬಲ ಮೇಲ್ದಂಡೆ ಸೇರಿ ಎಲ್ಲಾ ಅಚ್ಚುಕಟ್ಟು ನಾಲೆಗಳಿಗೆ ಹರಿಸಿ, ಆ ಮೂಲಕ ಜನ-ಜಾನುವಾರುಗಳ ನೀರಡಿಕೆ ನೀಗಿಸಬೇಕು’ ಎಂದು ಒತ್ತಾಯಿಸಿದರು.