ಪ್ರಾಸ್ತಾವಿಕವಾಗಿ ಮಾತನಾಡಿದ ಆರ್.ಶ್ರೀನಿವಾಸ್ ಗೌಡ, ‘ಜಿಲ್ಲೆಯ ವಿವಿಧ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ 2020–21ನೇ ಸಾಲಿನಲ್ಲಿ 298 ದರೋಡೆ, ಸುಲಿಗೆ, ಮನೆ ಕಳ್ಳತನಪ್ರಕರಣ ಭೇದಿಸಿ, 108 ಆರೋಪಿಗಳನ್ನು ಬಂಧಿಸಿ, ₹ 5.50 ಕೋಟಿ ಮೌಲ್ಯದ ವಸ್ತುಗಳನ್ನುವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಕೋರ್ಟ್ ಆದೇಶ ಪ್ರಕಾರ 71 ಪ್ರಕರಣಗಳಲ್ಲಿ ₹ 2.80ಕೋಟಿ ಸ್ವತ್ತನ್ನು ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಲಾಗುವುದು’ ಎಂದರು.