<p>ಹಿರೀಸಾವೆ: ಹೋಬಳಿಯಲ್ಲಿ ಕಳೆದ ನಾಲ್ಕು ದಿನದಿಂದ ಯೂರಿಯಾ ಗೊಬ್ಬರ ಸಿಗದೆ ರೈತರು ಪರದಾಡುತ್ತಿದ್ದಾರೆ.</p>.<p>ಕಳೆದ ಒಂದು ವಾರದಿಂದ ಹೋಬಳಿಯಲ್ಲಿ ಜಿಡಿ ಮಳೆಯಾಗಿದೆ. ಬಿತ್ತನೆ ಮಾಡಿದ್ದ ರಾಗಿ, ಮುಸುಕಿನ ಜೋಳಕ್ಕೆ ಈಗ ಅಗತ್ಯವಾಗಿ ಯೂರಿಯಾ ಕೊಡಬೇಕಿದೆ. ಆದರೆ, ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿದಂತೆ, ಖಾಸಗಿ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇಲ್ಲ ಎಂಬ ಫಲಕವನ್ನು ಹಾಕಿದ್ದಾರೆ.</p>.<p>‘30 ದಿನದ ರಾಗಿ ಪೈರಿಗೆ, 40 ದಿನದ ಜೋಳದ ಪೈರಿಗೆ ಯೂರಿಯಾ ಹಾಕಿದರೆ, ಉತ್ತಮವಾಗಿ ಬೆಳೆಯುತ್ತದೆ, ಆದರೆ ಯೂರಿಯಾ ಸಿಗುತ್ತಿಲ್ಲ’ ಎನ್ನುತ್ತಾರೆ ರೈತ ಬೆಳಗೀಹಳ್ಳಿ ಪುಟ್ಟರಾಜು.</p>.<p>‘ಒಂದು ವಾರದ ಹಿಂದೆ ಯೂರಿಯಾವನ್ನು ಜಿಲ್ಲೆಯ ಎಲ್ಲ ತಾಲ್ಲೂಕಿಗೂ ನೀಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಯೂರಿಯಾ ಸರಬರಾಜು ಮಾಡುತ್ತಿಲ್ಲ, ಇದರಿಂದ ಜಿಲ್ಲೆಯ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಕೆ. ರಘು ಆರೋಪಿಸಿದರು.</p>.<p>‘ಯೂರಿಯಾಕ್ಕೆ ಹೆಚ್ಚಿನ ಬೇಡಿಕೆ ಇದೆ, ಅಗತ್ಯ ಇರುವಷ್ಟು ಗೊಬ್ಬರವನ್ನು ಹೋಬಳಿಗೆ ಸರಬರಾಜು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಎರಡು ದಿನದಲ್ಲಿ ಹೋಬಳಿಗೆ ಸರಬರಾಜು ಆಗಲಿದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿಲ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರೀಸಾವೆ: ಹೋಬಳಿಯಲ್ಲಿ ಕಳೆದ ನಾಲ್ಕು ದಿನದಿಂದ ಯೂರಿಯಾ ಗೊಬ್ಬರ ಸಿಗದೆ ರೈತರು ಪರದಾಡುತ್ತಿದ್ದಾರೆ.</p>.<p>ಕಳೆದ ಒಂದು ವಾರದಿಂದ ಹೋಬಳಿಯಲ್ಲಿ ಜಿಡಿ ಮಳೆಯಾಗಿದೆ. ಬಿತ್ತನೆ ಮಾಡಿದ್ದ ರಾಗಿ, ಮುಸುಕಿನ ಜೋಳಕ್ಕೆ ಈಗ ಅಗತ್ಯವಾಗಿ ಯೂರಿಯಾ ಕೊಡಬೇಕಿದೆ. ಆದರೆ, ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿದಂತೆ, ಖಾಸಗಿ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇಲ್ಲ ಎಂಬ ಫಲಕವನ್ನು ಹಾಕಿದ್ದಾರೆ.</p>.<p>‘30 ದಿನದ ರಾಗಿ ಪೈರಿಗೆ, 40 ದಿನದ ಜೋಳದ ಪೈರಿಗೆ ಯೂರಿಯಾ ಹಾಕಿದರೆ, ಉತ್ತಮವಾಗಿ ಬೆಳೆಯುತ್ತದೆ, ಆದರೆ ಯೂರಿಯಾ ಸಿಗುತ್ತಿಲ್ಲ’ ಎನ್ನುತ್ತಾರೆ ರೈತ ಬೆಳಗೀಹಳ್ಳಿ ಪುಟ್ಟರಾಜು.</p>.<p>‘ಒಂದು ವಾರದ ಹಿಂದೆ ಯೂರಿಯಾವನ್ನು ಜಿಲ್ಲೆಯ ಎಲ್ಲ ತಾಲ್ಲೂಕಿಗೂ ನೀಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಯೂರಿಯಾ ಸರಬರಾಜು ಮಾಡುತ್ತಿಲ್ಲ, ಇದರಿಂದ ಜಿಲ್ಲೆಯ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಕೆ. ರಘು ಆರೋಪಿಸಿದರು.</p>.<p>‘ಯೂರಿಯಾಕ್ಕೆ ಹೆಚ್ಚಿನ ಬೇಡಿಕೆ ಇದೆ, ಅಗತ್ಯ ಇರುವಷ್ಟು ಗೊಬ್ಬರವನ್ನು ಹೋಬಳಿಗೆ ಸರಬರಾಜು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಎರಡು ದಿನದಲ್ಲಿ ಹೋಬಳಿಗೆ ಸರಬರಾಜು ಆಗಲಿದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿಲ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>