‘ಜುಲೈ 23ರ ಉಲ್ಲೇಖದಂತೆ ಪಟ್ಟಣ ಪಂಚಾಯಿತಿ ಎಂಜಿನಿಯರ್ ಕವಿತಾ ಅವರನ್ನು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಪುರಸಭೆಗೆ ವರ್ಗಾವಣೆಗೊಳಿಸಿದ್ದು ಈ ಆದೇಶವನ್ನು ತಡೆಹಿಡಿಯಲಾಗಿದೆ. ಅಂಕೋಲಾದಲ್ಲಿ ಅತಿವೃಷ್ಟಿಯಿಂದ ಸಾರ್ವಜನಿಕ ರಸ್ತೆ, ಚರಂಡಿ ಇನ್ನಿತರ ಅವಶ್ಯಕ ಕಾಮಗಾರಿಗಳು ದುರಸ್ತಿಯಲ್ಲಿದ್ದು ಕೂಡಲೇ ಅವುಗಳನ್ನು ಸರಿಪಡಿಸಲು ಇವರ ಸೇವೆ ಅವಶ್ಯಕವಾಗಿದೆ. ಹಾಗಾಗಿ ತಡೆಹಿಡಿದಿರುವ ಆದೇಶವನ್ನು ತೆರವು ಗೊಳಿಸಿ ಇವರನ್ನು ಅಲ್ಲಿಗೆ ನಿಯೋಜನೆಗೊಳಿಸಬೇಕು’ ಎಂದು ಪತ್ರದಲ್ಲಿ ಹೇಳಲಾಗಿದೆ.