ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸ್ಥಳದ ಮಹಜರು ನಡೆಸಿದ ನಂತರ ಅಂತಿಮ ವರದಿಯನ್ನು ಅಲ್ಲಿದ್ದವರಿಗೆ ಓದಿ ಹೇಳಬೇಕು. ವಿದ್ಯಾವಂತರಿದ್ದರೆ, ಓದಲು ಅವಕಾಶ ಕೊಡಬೇಕು. ನಂತರ ಸಹಿ ಪಡೆಯಬೇಕು. ಆದರೆ, ಎಸ್ಐಟಿ ಅಧಿಕಾರಿಗಳು ಕೇವಲ ಮನೆಯಲ್ಲಿ ಕುಳಿತು ಏಕಪಕ್ಷೀಯವಾಗಿ ಮಹಜರು ವರದಿಯನ್ನು ತಯಾರಿಸಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.