ಹಾಸನ: ‘ಮಹಮದ್ ಪೈಗಂಬರ್ ಅವರ ಮೊಮ್ಮಕ್ಕಳು ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತಿದೆ’ ಎಂದು ಆಂಧ್ರಪ್ರದೇಶದ ಆದೋನಿಯ ಮುಸ್ಲಿಂ ಧರ್ಮಗುರು ಜುಬೇರ್ ಬಾಷಾ ಹೇಳಿದರು.
ಅರಸೀಕೆರೆ ನಗರದ ಕೆಂಡದಗುಂಡಿ ವೃತ್ತದಲ್ಲಿ ಸತತ 8 ದಿನಗಳಿಂದ ನಡೆದ ಮೊಹರಂ ಹಬ್ಬದ ಆಚರಣೆಯ 9ನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಸೀಕೆರೆ ಸುನ್ನಿ ಜಾಮೀಯ ಮಸೀದಿಯ ಧರ್ಮಗುರು ಮೌಲಾನಾ ಫೈಯಮುದ್ದೀನ್ ಖಾದ್ರಿ, ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಅಧ್ಯಕ್ಷ ಸಯ್ಯದ್ ರಫೀಕ್, ರಿಯಾಜ್ ಪಾಷಾ, ನವಾಜ್ ಪಾಷಾ ಇದ್ದರು.
ಹಾಸನ ಜಿಲ್ಲೆಯ ಅರಸೀಕೆರೆಯ ಕೆಂಡದಗುಂಡಿ ವೃತ್ತದಲ್ಲಿ ನಡೆದ ಮೊಹರಂ ಹಬ್ಬದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರು ಜುಬೇರ್ ಬಾಷಾ ಮಾತನಾಡಿದರು