’15 ದಿನಗಳ ಹಿಂದೆ ಗೂರನಹಳ್ಳಿಯ ಗಣಪತಿ ಪೆಂಡಾಲ್ ನಲ್ಲಿ ವೇಳೆ ಹಾಡು ಬದಲಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೃತ ಅಭಿಜಿತ್ ಹಾಗೂ ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಆದಾದ ಬಳಿಕ ಆರೋಪಿಗಳ ಮನೆಯ ಹತ್ತಿರ ಹೋಗಿ ಅಭಿಜಿತ್ ಗಲಾಟೆ ಮಾಡಿ, ನಿಂದಿಸಿದ್ದನು. ಇದರಿಂದ ಸಿಟ್ಟಾದ ನಾಲ್ವರು ಯುವಕರು, ಅಭಿಜಿತ್ನನ್ನು ಕಳೆದ ವಾರ ಪಟ್ಟಣದಲ್ಲಿ ಕೊಲೆ ಮಾಡಿದ್ದರು ಎಂದು ಡಿವೈಎಸ್ಪಿ ಬಿ.ಬಿ.ಲಕ್ಷ್ಮೇಗೌಡ ಸೋಮವಾರ ತಿಳಿಸಿದರು.