ಗ್ರಾಮಸ್ಥರಿಗೆ ತಮ್ಮ ಊರಿನ ಸ್ಮಾರಕದ ಬಗ್ಗೆ ಕಾಳಜಿ ಇದ್ದರೂ ಸಂರಕ್ಷಿಸಲಾಗುತ್ತಿಲ್ಲ. ಇತ್ತ ಇತಿಹಾಸ ಮತ್ತು ಪುರಾತತ್ವ ಇಲಾಖೆಯವರು ಸಹ ಗ್ರಾಮದ ಸ್ಮಾರಕದತ್ತ ಮುಖ ಮಾಡುತ್ತಿಲ್ಲ. ಕೇಂದ್ರ ಪುರಾತತ್ವ ಸರ್ವೆಕ್ಷಣಾ ಇಲಾಖೆ ಹಾಗೂ ರಾಜ್ಯದ ಪರಂಪರೆ ಇಲಾಖೆಯ ಅಧಿಕಾರಿಗಳು ಸ್ಮಾರಕ ಉಳಿಸುವುದಕ್ಕೆ ಮನಸ್ಸು ಮಾಡಿಲ್ಲ. ಹೀಗಾಗಿ ಸ್ಮಾರಕ ಹಾವು. ಇಲಿ, ಹೆಗ್ಗಣಗಳ ವಾಸಸ್ಥಾನವಾಗಿದೆ.