ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಸಂಘದ ಗುರುತಿನ ಚೀಟಿ ಕಡ್ಡಾಯ: ದಯಾನಂದ್

ಒಕ್ಕಲಿಗರ ಸಂಘದ ಚುನಾವಣೆಗೆ ಸಕಲ ಸಿದ್ಧತೆ: ದಯಾನಂದ್
Last Updated 4 ಡಿಸೆಂಬರ್ 2021, 15:01 IST
ಅಕ್ಷರ ಗಾತ್ರ

ಹಾಸನ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಡಿ.12 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಸಂಘದ ಗುರುತಿನ ಚೀಟಿ ಕಡ್ಡಾಯ ಎಂದು ಜಿಲ್ಲಾಚುನಾವಣಾಧಿಕಾರಿಯೂ ಆಗಿರುವ ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಕೆ.ದಯಾನಂದ್ತಿಳಿಸಿದರು.

ಸಂಘದ ಗುರುತಿನ ಚೀಟಿ ಹೊರತು ಪಡಿಸಿ ಬೇರೆ ಯಾವುದೇ ಐಡಿ ಕಾರ್ಡ್ ತಂದರೂ ಮತಹಾಕಲು ಮಾಡಲು ಅವಕಾಶ ನೀಡುವುದಿಲ್ಲ. ಒಟ್ಟು 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು,ಜಿಲ್ಲೆಯಲ್ಲಿರುವ 53,076 ಮತದಾರರು ಮೂರು ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ ಎಂದುಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮತದಾನಕ್ಕೆ ಅನುಕೂಲವಾಗುವಂತೆ ನಗರ ಹಾಗೂ ಜಿಲ್ಲಾದಾದ್ಯಂತ 107 ಮತಗಟ್ಟೆಗಳನ್ನುತೆರೆಯಲಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು 19,925 ಮತದಾರರಿದ್ದರೆ, ಹಾಸನತಾಲೂಕಿನಲ್ಲಿ 16,075, ಅರಕಲಗೂಡು 2915, ಆಲೂರು 1061, ಹೊಳೆನರಸೀಪುರ 2716,ಅರಸೀಕೆರೆ 4053, ಸಕಲೇಶಪುರ 3637 ಮತ್ತು ಬೇಲೂರಿನಲ್ಲಿ 2694 ಮತದಾರರಿದ್ದಾರೆ.ಮತದಾನಕ್ಕಾಗಿ ಚನ್ನರಾಯಪಟ್ಟಣದಲ್ಲಿ 40 ಮತಗಟ್ಟೆ ತೆರೆಯಲಾಗಿದೆ. ಉಳಿದಂತೆ ಹಾಸನ 32,ಹೊಳೆನರಸೀಪುರ, ಬೇಲೂರು ಮತ್ತು ಅರಕಲಗೂಡು ತಲಾ 6, ಅರಸೀಕೆರೆ ಮತ್ತು ಸಕಲೇಶಪುರದಲ್ಲಿ ತಲಾ 7 ಹಾಗೂ ಆಲೂರಿನಲ್ಲಿ 2 ಮತಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ
ನೀಡಿದರು.

ಚುನಾವಣೆ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತವಾಗಿ ನಡೆಯಲು 10 ಜನ ಸಹಾಯಕಚುನಾವಣಾ ಅಧಿಕಾರಿಗಳು ಮತ್ತು ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು,ಚುನಾವಣಾ ಕಾರ್ಯಕ್ಕೆ 500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅರ್ಹಮತದಾರರು ನಿರ್ಭಯದಿಂದ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಹಕ್ಕು ಚಲಾಯಿಸುವಂತೆ ಮನವಿಮಾಡಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಮಾರ್ಗಸೂಚಿಯನ್ನೂ ಪಾಲನೆ ಮಾಡಲಾಗುತ್ತಿದೆ. ಒಂದುವೇಳೆ ಸೋಂಕು ಇರುವ ಮತದಾರರಿದ್ದರೆ ಅವರಿಗೆ ಅವರ ವ್ಯಾಪ್ತಿಯ ಮತಕೇಂದ್ರದಲ್ಲೇ ಸಂಜೆ 4 ರಿಂದ 5 ಗಂಟೆವರೆಗೆ ಪ್ರತ್ಯೇಕ ಮತದಾನದ ವ್ಯವಸ್ಥೆ ಮಾಡಲಾಗಿದ್ದು, ಪಾರದರ್ಶಕ ಚುನಾವಣೆಗೆಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮತ ಎಣಿಕೆ ಕಾರ್ಯ ಡಿ.15 ರಂದು ಬೆಳಗ್ಗೆ 9 ರಿಂದ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತುಸ್ನಾತಕೋತ್ತರ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ನೋಡಲ್ ಅಧಿಕಾರಿಗಳಾದ ತೇಜಸ್ವಿನಿ, ಶೀಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT