<p><strong>ಹಾಸನ:</strong> ಕೊರೊನಾ ಸೋಂಕಿತರಿಗೆ ಸೋಂಕಿತರಿಗೆ ನೆರವಾಗುವ ಉದ್ದೇಶದಿಂದ ಐಎಲ್ಎಫ್ (ಇಂಟರ್ ನ್ಯಾಷನಲ್<br />ಲಿಂಗಾಯತ ಫೋರಂ) ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಆಕ್ಸಿಜನ್ ಆನ್ ವ್ಹೀಲ್ಸ್ ಸೇವೆ ಆರಂಭಿಸಿದೆ.</p>.<p>ಐಎಲ್ಎಫ್ ಸುಮಾರು ₹1.50 ಲಕ್ಷ ವೆಚ್ಚದಲ್ಲಿ ಸಾರಿಗೆ ಸಂಸ್ಥೆ ಬಸ್ಗೆ 2 ವೈದ್ಯಕೀಯ ಆಮ್ಲಜನಕ ಸಿಲಿಂಡರ್,<br />ರೋಗಿಗೆ ಅಳವಡಿಸಲು ಬೇಕಾಗುವ ವೈದ್ಯಕೀಯ ಉಪಕರಣ, ಸೀಟಿನ ವ್ಯವಸ್ಥೆ ಮಾಡಿಕೊಟ್ಟಿದೆ. ಬೇಲೂರು ಪಟ್ಟಣದಲ್ಲಿ<br />ಆಕ್ಸಿಜನ್ ಆನ್ ವ್ಹೀಲ್ಸ್ಗೆ ಸೋಮವಾರ ಚಾಲನೆ ಸಿಗಲಿದೆ.</p>.<p>ಈ ಬಸ್ನಲ್ಲಿ ಆರು ರೋಗಿಗಳನ್ನು ಆಸ್ಪತ್ರೆಗೆ ಕರೆತರಬಹುದಾಗಿದೆ. ಆಮ್ಲಜನಕ ಕೊರತೆಯಿಂದ ಬಳಲುವ ರೋಗಿಗಳಿಗೆ<br />ನರ್ಸ್ಗಳು ಆಕ್ಸಿಜನ್ ಅಳವಡಿಸಲಿದ್ದಾರೆ. ಗ್ರಾಮೀಣ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಸೇವೆ ಪ್ರಾರಂಭಿಸಲಾಗಿದ್ದು<br />ಆಸ್ಪತ್ರೆ ಸೇರುವ ವರೆಗೆ ರೋಗಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಿಗಾ ವಹಿಸಲಾಗಿದೆ. ಒಂದು<br />ವೇಳೆ ನಿಗದಿತ ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆಯಿದ್ದರೆ ಬಸ್ನಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.</p>.<p>ಕೆಎಸ್ಆರ್ಟಿಸಿ ಹಾಸನ ವಿಭಾಗದಿಂದ ನಾಲ್ಕು ಬಸ್ಗಳನ್ನು ಕೋವಿಡ್ ಕಾರ್ಯಕ್ಕೆ ವಿನಿಯೋಗಿಸಲಾಗಿದೆ. ಎರಡು<br />ಹಾಸನ, 1 ಬಸ್ ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದೆ.<br />4ನೇ ಬಸ್ ಆಕ್ಸಿಜನ್ ಆನ್ ವ್ಹೀಲ್ಸ್ ಕಾರ್ಯ ನಿರ್ವಹಿಸಲಿದೆ.</p>.<p>ಬಸ್ನಲ್ಲೇ ಆಮ್ಲಜನಕ ಸಿಗುವುದರಿಂದ ಉಸಿರಾಟದ ಸಮಸ್ಯೆ ಇರುವವರು ಆಂಬುಲೆನ್ಸ್ಗಾಗಿ ಕಾಯುವ ಅವಶ್ಯಕತೆ ಇಲ್ಲ. ದೂರದ ಊರುಗಳಿಂದ ಆಮ್ಲಜನಕ ಸಹಾಯದಿಂದ ಈ ಬಸ್ಗಳಲ್ಲಿ ಆಸ್ಪತ್ರೆ ಬರಬಹುದಾಗಿದೆ.</p>.<p>ಐಎಲ್ಎಫ್ ಸಂಸ್ಥೆ ಆಕ್ಸಿಜನ್ ಆನ್ ವ್ಹೀಲ್ಸ್ ಸೇವೆ ಆರಂಭಿಸುವುದಾಗಿ ಪ್ರಸ್ತಾಪ ಸಲ್ಲಿಸಿದಾಗ ಮೇಲಧಿಕಾರಿಗಳ ಅನುಮತಿ ಪಡೆದು ಬಸ್ ವಿನ್ಯಾಸ ಮಾಡಲಾಗಿದೆ. ನಾಲ್ಕು ಬಸ್ಗಳನ್ನು ಕೋವಿಡ್ ಕಾರ್ಯಕ್ಕೆ ನೀಡಲಾಗಿದೆ ಎಂದುಕೆಎಸ್ಆರ್ಟಿಸಿ ವಿಭಾಗಿಯ ತಾಂತ್ರಿಕ ಅಧಿಕಾರಿಕೆ. ನಂದಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಕೊರೊನಾ ಸೋಂಕಿತರಿಗೆ ಸೋಂಕಿತರಿಗೆ ನೆರವಾಗುವ ಉದ್ದೇಶದಿಂದ ಐಎಲ್ಎಫ್ (ಇಂಟರ್ ನ್ಯಾಷನಲ್<br />ಲಿಂಗಾಯತ ಫೋರಂ) ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಆಕ್ಸಿಜನ್ ಆನ್ ವ್ಹೀಲ್ಸ್ ಸೇವೆ ಆರಂಭಿಸಿದೆ.</p>.<p>ಐಎಲ್ಎಫ್ ಸುಮಾರು ₹1.50 ಲಕ್ಷ ವೆಚ್ಚದಲ್ಲಿ ಸಾರಿಗೆ ಸಂಸ್ಥೆ ಬಸ್ಗೆ 2 ವೈದ್ಯಕೀಯ ಆಮ್ಲಜನಕ ಸಿಲಿಂಡರ್,<br />ರೋಗಿಗೆ ಅಳವಡಿಸಲು ಬೇಕಾಗುವ ವೈದ್ಯಕೀಯ ಉಪಕರಣ, ಸೀಟಿನ ವ್ಯವಸ್ಥೆ ಮಾಡಿಕೊಟ್ಟಿದೆ. ಬೇಲೂರು ಪಟ್ಟಣದಲ್ಲಿ<br />ಆಕ್ಸಿಜನ್ ಆನ್ ವ್ಹೀಲ್ಸ್ಗೆ ಸೋಮವಾರ ಚಾಲನೆ ಸಿಗಲಿದೆ.</p>.<p>ಈ ಬಸ್ನಲ್ಲಿ ಆರು ರೋಗಿಗಳನ್ನು ಆಸ್ಪತ್ರೆಗೆ ಕರೆತರಬಹುದಾಗಿದೆ. ಆಮ್ಲಜನಕ ಕೊರತೆಯಿಂದ ಬಳಲುವ ರೋಗಿಗಳಿಗೆ<br />ನರ್ಸ್ಗಳು ಆಕ್ಸಿಜನ್ ಅಳವಡಿಸಲಿದ್ದಾರೆ. ಗ್ರಾಮೀಣ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಸೇವೆ ಪ್ರಾರಂಭಿಸಲಾಗಿದ್ದು<br />ಆಸ್ಪತ್ರೆ ಸೇರುವ ವರೆಗೆ ರೋಗಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಿಗಾ ವಹಿಸಲಾಗಿದೆ. ಒಂದು<br />ವೇಳೆ ನಿಗದಿತ ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆಯಿದ್ದರೆ ಬಸ್ನಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.</p>.<p>ಕೆಎಸ್ಆರ್ಟಿಸಿ ಹಾಸನ ವಿಭಾಗದಿಂದ ನಾಲ್ಕು ಬಸ್ಗಳನ್ನು ಕೋವಿಡ್ ಕಾರ್ಯಕ್ಕೆ ವಿನಿಯೋಗಿಸಲಾಗಿದೆ. ಎರಡು<br />ಹಾಸನ, 1 ಬಸ್ ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದೆ.<br />4ನೇ ಬಸ್ ಆಕ್ಸಿಜನ್ ಆನ್ ವ್ಹೀಲ್ಸ್ ಕಾರ್ಯ ನಿರ್ವಹಿಸಲಿದೆ.</p>.<p>ಬಸ್ನಲ್ಲೇ ಆಮ್ಲಜನಕ ಸಿಗುವುದರಿಂದ ಉಸಿರಾಟದ ಸಮಸ್ಯೆ ಇರುವವರು ಆಂಬುಲೆನ್ಸ್ಗಾಗಿ ಕಾಯುವ ಅವಶ್ಯಕತೆ ಇಲ್ಲ. ದೂರದ ಊರುಗಳಿಂದ ಆಮ್ಲಜನಕ ಸಹಾಯದಿಂದ ಈ ಬಸ್ಗಳಲ್ಲಿ ಆಸ್ಪತ್ರೆ ಬರಬಹುದಾಗಿದೆ.</p>.<p>ಐಎಲ್ಎಫ್ ಸಂಸ್ಥೆ ಆಕ್ಸಿಜನ್ ಆನ್ ವ್ಹೀಲ್ಸ್ ಸೇವೆ ಆರಂಭಿಸುವುದಾಗಿ ಪ್ರಸ್ತಾಪ ಸಲ್ಲಿಸಿದಾಗ ಮೇಲಧಿಕಾರಿಗಳ ಅನುಮತಿ ಪಡೆದು ಬಸ್ ವಿನ್ಯಾಸ ಮಾಡಲಾಗಿದೆ. ನಾಲ್ಕು ಬಸ್ಗಳನ್ನು ಕೋವಿಡ್ ಕಾರ್ಯಕ್ಕೆ ನೀಡಲಾಗಿದೆ ಎಂದುಕೆಎಸ್ಆರ್ಟಿಸಿ ವಿಭಾಗಿಯ ತಾಂತ್ರಿಕ ಅಧಿಕಾರಿಕೆ. ನಂದಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>