ಹಾಸನ: ಒಂದು ಸಮುದಾಯ ಉದ್ದೇಶಿಸಿ ಪ್ರಚಾರ ಭಾಷಣ ಮಾಡಿದ ಆರೋಪದ ಮೇರೆಗೆ ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಏ.7ರಂದು ಹಳ್ಳಿ ಮೈಸೂರು ಹೋಬಳಿಯ ದೊಡ್ಡ ಕಾಡನೂರು ಗ್ರಾಮದಲ್ಲಿ ವೀರಶೈವ ಸಮುದಾಯ ಉಲ್ಲೇಖಿಸಿ ಪ್ರಚಾರ ಭಾಷಣ ಮಾಡಿದ್ದರು. ಜಾತಿಯಾಧರಿಸಿ ಮತದಾನ ಮಾಡಲು ಪ್ರೇರಣೆ ಹಿನ್ನಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ದೂರು ಆಧರಿಸಿ ಹಳ್ಳಿ ಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ "ದಲಿತರ ಮತ ಕೇಳಲು ಜೆಡಿಎಸ್ ಗೆ ನೈತಿಕತೆ ಇಲ್ಲ' ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಎಚ್.ಎಂ.ವಿಶ್ವನಾಥ್ ವಿರುದ್ಧ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.