ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಕೆ. ಸಂದೇಶ್ ಮಾತನಾಡಿ, ಸೀಗೆ ಗ್ರಾಮಸ್ಥರು ಪಡಿತರ
ಪಡೆಯಲು ವೀರಾಪುರ ಗ್ರಾಮಕ್ಕೆ ಹೋಗಬೇಕು. ಹಾಗಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕಾರ್ಡ್ಗೆ ಒಟಿಪಿ ನೀಡಿ ವಾಪಸ್ ಬೈಕ್ನಲ್ಲಿ ಬರುತ್ತಿದ್ದ ಗ್ರಾಮದ ದಿನೇಶ್ ನನ್ನು ವೀರಾಪುರ ಗ್ರಾಮದ ಒಕ್ಕಲಿಗ ಸಮುದಾಯದ
ರಘು, ಆದಿತ್ಯ ಮತ್ತು ಕೆಂಚ ಎಂಬುವರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ
ಬಿಜೆಪಿಗೆ ಸಹಕಾರ ನೀಡಿದ್ದೀಯಾ ಎಂದು ನಿಂದಿಸಿದ್ದಾರೆ ಎಂದು ಆರೋಪಿಸಿದರು.