ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾಥಸ್ವಾಮಿ ರಥೋತ್ಸವ

Last Updated 28 ಫೆಬ್ರುವರಿ 2022, 3:01 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನ ಮಣಜೂರಿನಲ್ಲಿ ರಂಗನಾಥಸ್ವಾಮಿ ರಥೋತ್ಸವ ಭಾನುವಾರ ಜರುಗಿತು.

ರಥೋತ್ಸವದ ನಿಮಿತ್ತ ದೇವಸ್ಥಾನದಲ್ಲಿ ಕೆಲ ದಿನಗಳಿಂದ ಧಾರ್ಮಿಕ ಪೂಜಾ ವಿಧಾನಗಳು ಸಾಗಿದವು. ದೇವಸ್ಥಾನದ ಸುತ್ತಲಿನ ಪ್ರತಿ ಹಳ್ಳಿಗೂ ದೇವರ ಮೂರ್ತಿ ಕೊಂಡೊಯ್ಯಲಾಗಿತ್ತು. ಆಗ ಗ್ರಾಮಸ್ಥರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದ್ದರು.

ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಧ್ಯಾಹ್ನ ಉತ್ಸವ ಮೂರ್ತಿ ಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿ ಸಿದ ನಂತರ ಭಕ್ತರು ತೇರು ಎಳೆದು ಸಂಭ್ರಮಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಅರ್ಚಕ ರಾಮಕೃಷ್ಣಯ್ಯ ಪೂಜೆ ನೆರವೇರಿಸಿದರು. ಗ್ರಾ.ಪಂ ಸದಸ್ಯರಾದ ನೆಲಬಳ್ಳಿ ಪ್ರಕಾಶ್, ಸಣ್ಣಯ್ಯ, ಜಾತ್ರಾ ಸಮಿತಿಯ ಸೋಮಣ್ಣ, ಸದಾನಂದ, ವರದರಾಜ್, ಪಾರಸನಹಳ್ಳಿ ಪರಮೇಶ್, ಸಣ್ಣಪ್ಪ, ವಕೀಲರಾದ ವಿಶ್ವನಾಥ್, ಆನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT