‘40ಕ್ಕೂ ಹೆಚ್ಚು ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಹತ್ತಿಕ್ಕಲು ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರು ಕಮಿಷನರ್, ಡಿಜಿ, ಬಿಬಿಎಂಪಿ ಆಡಳಿತಾಧಿಕಾರಿ ಸೇರಿದಂತೆ ಮುಖ್ಯ ಹುದ್ದೆಗಳಲ್ಲಿರುವ ಯಾರೂ ಕನ್ನಡಿಗರಲ್ಲ. ಎಲ್ಲ ಕಡೆ ಪರ ಭಾಷಿಕರನ್ನೇ ನೇಮಿಸಲಾಗಿದೆ. ಈ ಹಿಂದೆ ತಿರುವಳ್ಳುವರ್ ಪ್ರತಿಮೆ ಪ್ರತಿಷ್ಠಾಪನೆ ವಿರೋಧಿಸಿ ಪ್ರತಿಭಟನೆ ನಡೆಸಿದಾಗ ನನ್ನನ್ನು ಸೇರಿದಂತೆ ಅನೇಕ ಹೋರಾಟಗಾರರನ್ನು ನಾಲ್ಕು ದಿನ ಹಾಸನದ ಜೈಲಿಗೆ ಹಾಕಲಾಗಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.