ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸಚಿವ ರೇವಣ್ಣ ನಿಂದಿಸಿದ ಶಿಕ್ಷಕ ಅಮಾನತು

Last Updated 2 ನವೆಂಬರ್ 2018, 9:55 IST
ಅಕ್ಷರ ಗಾತ್ರ

ಹಾಸನ: ವರ್ಗಾವಣೆ ಸಂಬಂಧ ಶಿಕ್ಷಕಿ ಜತೆಗಿನ ಮೊಬೈಲ್‌ ಸಂಭಾಷಣೆಯಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ನಿಂದಿಸಿದ ಆಲೂರು ತಾಲ್ಲೂಕು ಚನ್ನಪುರದ ಪ್ರಾಥಮಿಕ ಶಾಲೆ ಶಿಕ್ಷಕ ವರದರಾಜು ಅವರನ್ನು ಅಮಾನತುಗೊಳಿಸಲಾಗಿದೆ.

ಸರ್ಕಾರಿ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷರೂ ಆಗಿರುವ ವರದರಾಜು, ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಶಿಕ್ಷಕಿಯೊಬ್ಬರ ಜತೆ ನಡೆಸಿದ ಮೊಬೈಲ್‌ ಸಂಭಾಷಣೆಯಲ್ಲಿ, ‘ರೇವಣ್ಣ ದಡ್ಡ, ಯಾರು ಏನ್‌ ಹೇಳುತ್ತಾರೆ ಅವರ ಮಾತು ಕೇಳುತ್ತಾನೆ. ಮನುಷ್ಯತ್ವ ಇಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈ ಆಡಿಯೊ ವೈರಲ್‌ ಆಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ವರದರಾಜುಗೆ ಡಿಡಿಪಿಐ ಮಂಜುನಾಥ್‌ ನೋಟಿಸ್‌ ನೀಡಿ, ಅಮಾನತು ಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT