ಸರ್ಕಾರಿ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷರೂ ಆಗಿರುವ ವರದರಾಜು, ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಶಿಕ್ಷಕಿಯೊಬ್ಬರ ಜತೆ ನಡೆಸಿದ ಮೊಬೈಲ್ ಸಂಭಾಷಣೆಯಲ್ಲಿ, ‘ರೇವಣ್ಣ ದಡ್ಡ, ಯಾರು ಏನ್ ಹೇಳುತ್ತಾರೆ ಅವರ ಮಾತು ಕೇಳುತ್ತಾನೆ. ಮನುಷ್ಯತ್ವ ಇಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈ ಆಡಿಯೊ ವೈರಲ್ ಆಗಿದೆ.