ಮಲ್ಲಿಗನೂರು ಸಮೀಪ ಹರಿಯುತ್ತಿರುವ ದೊಡ್ಡಹೊಳೆಗೆ ಕಳೆದ ಒಂದೂವರೆ ವರ್ಷದ ಹಿಂದೆ ಸುಮಾರು ₹ 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆಯ ಎರಡೂ ಬದಿಯಲ್ಲಿ ಮಣ್ಣು ತಂದು ಸುರಿಯಲಾಗಿತ್ತು. ಆದರೆ, ಮಳೆಯ ಕಾರಣ ಇದೀಗ ಮಣ್ಣು ಕುಸಿಯತೊಡಗಿದೆ. ಮಲೆನಾಡ ಭಾಗವಾಗಿರುವುದರಿಂದ ಮಳೆ ಹೆಚ್ಚು ಬರುವುದರಿಂದ ಮಣ್ಣು ಕುಸಿಯುವ ಪ್ರಮಾಣ ದಿನೇ ದಿನೇ ಹೆಚ್ಚಾಗಿದ್ದು ಪೂರ್ಣಪ್ರಮಾಣದಲ್ಲಿ ಕುಸಿದರೆ ಹೊಸಹಳ್ಳಿ, ಬೆಳ್ಳಾವರ ಹಾಗೂ ಅರೇಹಳ್ಳಿ ಈ ಮೂರು ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳಲಿದೆ.