ಹಾಸನ: ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ಎ. ಎನ್. ಪ್ರಕಾಶ ಗೌಡ ಅವರನ್ನು ವರ್ಗ ಮಾಡಿ, ಎಫ್ಎಸ್ಎಲ್ನಲ್ಲಿ ನಿರ್ದೇಶಕರಾಗಿದ್ದ ಚೇತನ್ ಸಿಂಗ್ ರಾಥೋಡ್ ಅವರು ನಿಯೋಜಿಸಿದೆ.
ಪ್ರಕಾಶ್ ಗೌಡ ಅವರನ್ನು ಹಳೆ ಪ್ರಕರಣವೊಂದರ ಸಂಬಂಧ ವರ್ಗ ಮಾಡುವಂತೆ ಬಿಜೆಪಿ ದೂರು ನೀಡಿತ್ತು. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಣಿಸಿ, ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿತು.
ಪ್ರಕಾಶ್ ಅವರು ಆರು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು, ಸದ್ಯ ಅವರಿಗೆ ಸ್ಥಳ ತೋರಿಸಿಲ್ಲ.
ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿಯಾಗಿದ್ದ ಅಕ್ರಂ ಪಾಷ ಅವರನ್ನು ವರ್ಗ ಮಾಡಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ನೇಮಕ ಮಾಡಲಾಗಿತ್ತು.