<p><strong>ಹೊಳೆನರಸೀಪುರ:</strong> ಶ್ರೀರಾಮ ನವಮಿ ಪ್ರಯುಕ್ತ ಭಾನುವಾರ ಕೋಟೆ ಮುಖ್ಯರಸ್ತೆಯ ರಘುಪತಿ ದೇವಾಲಯ ಆವರಣವನ್ನು ತಳಿರು ತೋರಣ, ಹೂವುಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.</p>.<p> ಅರ್ಚಕ ವೆಂಕಟನರಸಿಂಹನ್ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತಾಭಿಷೇಕ ಮಾಡಿ, ಶ್ರೀರಾಮ,ಲಕ್ಷ್ಮಣ ಸೀತಾಮಾತೆ ಹಾಗೂ ಹನುಮನನ್ನು ಅಲಂಕರಿಸಿ ಪೂಜಿಸಿ ಮಹಾಮಂಗಳಾರತಿ ಮಾಡಿದರು. ನಂತರ ತೀರ್ಥ, ಪ್ರಸಾದ ನೀಡಿದರು.</p>.<p>ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಸುದರ್ಶನ್, ಕಾವ್ಯ ಶರತ್, ಉದ್ಯಮಿ ಪಿಎಚ್ಇ ವೆಂಕಟೇಶ್, ವೆಂಕಟೇಶ್ ಗುಪ್ತಾ, ಡಿಶ್ ಕೋವಿಂದ,ಕಿಟ್ಟಿ , ನೂರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು.</p>.<p> ಕೋಸಂಬರಿ, ಮಜ್ಜಿಗೆ ವಿತರಣೆ: ಪಟ್ಟಣದ ಹನುಮೋತ್ಸವ ಆಚರಣೆ ಸಮಿತಿಯಿಂದ ಭಾನುವಾರ ಪುರಸಭೆ ಮುಂಭಾಗ ಶ್ರೀರಾಮನ ದೊಡ್ಡಕಟೌಟ್ ಇಟ್ಟು ಪೂಜಿಸಿದರು. ಮಧ್ಯಾಹ್ನದ ವರೆಗೂ ಸಾರ್ವಜನಿಕರಿಗೆ ಕೋಸಂಬರಿ ಮಜ್ಜಿಗೆ ವಿತರಿಸಿದರು.</p>.<p>ಕೋಟೆ ಶ್ರೀಚತುರ್ಭುಜ ಪಟ್ಟಾಭಿರಾಮ ದೇವಾಲಯ, ದೇವಾಂಗ ಬಡಾವಣೆಯ ಶ್ರೀರಾಮ ಮಂದಿರ, ಆರ್ಯ ಈಡಿಗರ ಶ್ರೀರಾಮ ಮಂದಿರ, ಕುರುಹಿನಶೆಟ್ಟಿ ಶ್ರೀರಾಮ ಮಂದಿರ, ಹಾಗೂ ಆಂಜನೇಯ ದೇವಾಲಯ, ಶ್ ಲಕ್ಚ್ಮೀನರಸಿಂಹಸ್ವಾಮಿ ದೇವಾಲಯ, ಅಯ್ಯಪ್ಪಸ್ವಾಮಿ ದೇವಾಲಯ ಹಾಗೂ ಕನ್ನಿಕಾಪರಮೇಶ್ವರಿ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ:</strong> ಶ್ರೀರಾಮ ನವಮಿ ಪ್ರಯುಕ್ತ ಭಾನುವಾರ ಕೋಟೆ ಮುಖ್ಯರಸ್ತೆಯ ರಘುಪತಿ ದೇವಾಲಯ ಆವರಣವನ್ನು ತಳಿರು ತೋರಣ, ಹೂವುಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.</p>.<p> ಅರ್ಚಕ ವೆಂಕಟನರಸಿಂಹನ್ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತಾಭಿಷೇಕ ಮಾಡಿ, ಶ್ರೀರಾಮ,ಲಕ್ಷ್ಮಣ ಸೀತಾಮಾತೆ ಹಾಗೂ ಹನುಮನನ್ನು ಅಲಂಕರಿಸಿ ಪೂಜಿಸಿ ಮಹಾಮಂಗಳಾರತಿ ಮಾಡಿದರು. ನಂತರ ತೀರ್ಥ, ಪ್ರಸಾದ ನೀಡಿದರು.</p>.<p>ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಸುದರ್ಶನ್, ಕಾವ್ಯ ಶರತ್, ಉದ್ಯಮಿ ಪಿಎಚ್ಇ ವೆಂಕಟೇಶ್, ವೆಂಕಟೇಶ್ ಗುಪ್ತಾ, ಡಿಶ್ ಕೋವಿಂದ,ಕಿಟ್ಟಿ , ನೂರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು.</p>.<p> ಕೋಸಂಬರಿ, ಮಜ್ಜಿಗೆ ವಿತರಣೆ: ಪಟ್ಟಣದ ಹನುಮೋತ್ಸವ ಆಚರಣೆ ಸಮಿತಿಯಿಂದ ಭಾನುವಾರ ಪುರಸಭೆ ಮುಂಭಾಗ ಶ್ರೀರಾಮನ ದೊಡ್ಡಕಟೌಟ್ ಇಟ್ಟು ಪೂಜಿಸಿದರು. ಮಧ್ಯಾಹ್ನದ ವರೆಗೂ ಸಾರ್ವಜನಿಕರಿಗೆ ಕೋಸಂಬರಿ ಮಜ್ಜಿಗೆ ವಿತರಿಸಿದರು.</p>.<p>ಕೋಟೆ ಶ್ರೀಚತುರ್ಭುಜ ಪಟ್ಟಾಭಿರಾಮ ದೇವಾಲಯ, ದೇವಾಂಗ ಬಡಾವಣೆಯ ಶ್ರೀರಾಮ ಮಂದಿರ, ಆರ್ಯ ಈಡಿಗರ ಶ್ರೀರಾಮ ಮಂದಿರ, ಕುರುಹಿನಶೆಟ್ಟಿ ಶ್ರೀರಾಮ ಮಂದಿರ, ಹಾಗೂ ಆಂಜನೇಯ ದೇವಾಲಯ, ಶ್ ಲಕ್ಚ್ಮೀನರಸಿಂಹಸ್ವಾಮಿ ದೇವಾಲಯ, ಅಯ್ಯಪ್ಪಸ್ವಾಮಿ ದೇವಾಲಯ ಹಾಗೂ ಕನ್ನಿಕಾಪರಮೇಶ್ವರಿ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>