<p><strong>ಹಾಸನ</strong>: ಚುನಾವಣೆ ವೇಳೆ ಸಂಸದ ಶ್ರೇಯಸ್ ಪಟೇಲ್ ಆಸ್ತಿ ವಿವರ ಮರೆಮಾಚಿದ್ದಾರೆ ಎಂಬ ಪ್ರಕರಣಕ್ಕೆ ಅ.6ರಂದು ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.</p>.<p>‘ತಾತ, ಮಾಜಿ ಸಂಸದ ಜಿ.ಪುಟ್ಟಸ್ವಾಮಿ ಗೌಡರ ಹೆಸರಿನಲ್ಲಿ, ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದ್ದು, ಆಸ್ತಿವಿವರದಲ್ಲಿ ಉಲ್ಲೇಖಿಸಿಲ್ಲ’ ಎಂಬುದು ವಕೀಲರ ಆರೋಪ. </p>.<p>ಶುಕ್ರವಾರ ಇಲ್ಲಿನ ಸಂಸದರ ಕಚೇರಿಗೆ ನೋಟಿಸ್ ಅಂಟಿಸಿದ ವಕೀಲ ಪೂರ್ಣಚಂದ್ರ ತೇಜಸ್ವಿ,ಬಳಿಕ ಪಾಲಿಕೆ ಆವರಣದಲ್ಲಿ ನೋಟಿಸ್ ನೀಡಲು ಮುಂದಾದಾಗ, ‘ನೀವು ಅಮೀನರೇ’ ಎಂದು ಪ್ರಶ್ನಿಸಿದ ಸಂಸದರು ಅದನ್ನು ಪಡೆಯದೇ ಮುಂದೆ ನಡೆದರು.</p>.<p>ಸಿಟ್ಟಾದ ವಕೀಲರು, ‘ಕೋರ್ಟ್ ಸೂಚನೆಯಂತೆ ಬಂದಿದ್ದೇನೆ. ಯುವ ಸಂಸದರಾಗಿ ಕಾನೂನಿಗೆ ಗೌರವ ಕೊಡಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಂತರ ಸಂಸದರು, ‘ಈ ಬಗ್ಗೆ ಕಾನೂನು ಪ್ರಕಾರ ಹೋರಾಟ ನಡೆಯಲಿದೆ. ನೋಟಿಸ್ ಜಾರಿಯಾಗಿದ್ದರೆ, ಕಚೇರಿಯಲ್ಲಿ ಕೊಡಬೇಕು ಅಥವಾ ಅಮೀನರ ಮೂಲಕವೇ ನೀಡಬೇಕು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಚುನಾವಣೆ ವೇಳೆ ಸಂಸದ ಶ್ರೇಯಸ್ ಪಟೇಲ್ ಆಸ್ತಿ ವಿವರ ಮರೆಮಾಚಿದ್ದಾರೆ ಎಂಬ ಪ್ರಕರಣಕ್ಕೆ ಅ.6ರಂದು ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.</p>.<p>‘ತಾತ, ಮಾಜಿ ಸಂಸದ ಜಿ.ಪುಟ್ಟಸ್ವಾಮಿ ಗೌಡರ ಹೆಸರಿನಲ್ಲಿ, ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದ್ದು, ಆಸ್ತಿವಿವರದಲ್ಲಿ ಉಲ್ಲೇಖಿಸಿಲ್ಲ’ ಎಂಬುದು ವಕೀಲರ ಆರೋಪ. </p>.<p>ಶುಕ್ರವಾರ ಇಲ್ಲಿನ ಸಂಸದರ ಕಚೇರಿಗೆ ನೋಟಿಸ್ ಅಂಟಿಸಿದ ವಕೀಲ ಪೂರ್ಣಚಂದ್ರ ತೇಜಸ್ವಿ,ಬಳಿಕ ಪಾಲಿಕೆ ಆವರಣದಲ್ಲಿ ನೋಟಿಸ್ ನೀಡಲು ಮುಂದಾದಾಗ, ‘ನೀವು ಅಮೀನರೇ’ ಎಂದು ಪ್ರಶ್ನಿಸಿದ ಸಂಸದರು ಅದನ್ನು ಪಡೆಯದೇ ಮುಂದೆ ನಡೆದರು.</p>.<p>ಸಿಟ್ಟಾದ ವಕೀಲರು, ‘ಕೋರ್ಟ್ ಸೂಚನೆಯಂತೆ ಬಂದಿದ್ದೇನೆ. ಯುವ ಸಂಸದರಾಗಿ ಕಾನೂನಿಗೆ ಗೌರವ ಕೊಡಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ನಂತರ ಸಂಸದರು, ‘ಈ ಬಗ್ಗೆ ಕಾನೂನು ಪ್ರಕಾರ ಹೋರಾಟ ನಡೆಯಲಿದೆ. ನೋಟಿಸ್ ಜಾರಿಯಾಗಿದ್ದರೆ, ಕಚೇರಿಯಲ್ಲಿ ಕೊಡಬೇಕು ಅಥವಾ ಅಮೀನರ ಮೂಲಕವೇ ನೀಡಬೇಕು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>