‘94 (ಸಿ) ಫಲಾನುಭವಿಗಳಿಗೆ ತುರ್ತಾಗಿ ಹಕ್ಕುಪತ್ರ ವಿತರಣೆ ಮಾಡುವ ಸಲುವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತೇನೆ. ಇಂಥ ಸಂದರ್ಭಗಳಲ್ಲಿ ತುಂಬಾ ವಯಸ್ಸಾದ ನಿರ್ಗತಿಕರು, ಅಂಗವಿಕಲರು ಹಾಗೂ ಕಡುಬಡವರನ್ನು ಕಂಡಿದ್ದೇನೆ. ಅವರಿಗೆ ಏನಾದರೂ ಸೇವೆ ಮಾಡಬೇಕು ಎಂಬ ಮನಸ್ಸಾಯಿತು. ಪ್ರತಿ ದಿನ ಹಳ್ಳಿಗೆ ಹೋಗುವಾಗ ಜೀಪಿನಲ್ಲಿ ಆಹಾರದ ಕಿಟ್ಗಳನ್ನು ಇಟ್ಟುಕೊಂಡೇ ಹೋಗುತ್ತೇನೆ’ ಎಂದುತಹಶೀಲ್ದಾರ್ ಎಚ್.ಬಿ. ಜೈಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.