ದೇವಸ್ಥಾನದ ಲೋಕಾರ್ಪಣೆ ಪ್ರಯುಕ್ತ ಶನಿವಾರ ಶಾಂತಿ ಮತ್ತು ಮಂಡಲ ಪೂಜೆ, ಕಲಶಾರಾಧನೆ, ಸುದರ್ಶನ, ನವಗ್ರಹ, ದೀಕ್ಷಾ, ಹೋಮಗಳು ನಡೆಯಲಿವೆ. ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ಗೋಪುರಕ್ಕೆ ಕಳಸ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ, ಕಳಾ ಹೋಮ, ಮಹಾ ಪೂರ್ಣಾಹುತಿ, ಕುಂಭಾಭಿಷೇಕ ಜರುಗಲಿವೆ. ಶಾಸಕ ಸಿ.ಎನ್. ಬಾಲಕೃಷ್ಣ, ಪ್ರಮುಖರಾದ ಗೋಪಾಲಸ್ವಾಮಿ, ದೇವರಾಜು, ರಂಗೇಗೌಡ , ನಾಗರಾಜಯ್ಯ ಭಾಗವಹಿಸುವರು.