ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ವಾಸನೆ: ಆರೋಪ

Last Updated 16 ಜೂನ್ 2021, 14:14 IST
ಅಕ್ಷರ ಗಾತ್ರ

ಹಾಸನ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ಹಿಂದೂಗಳಾಗಿ ಸಂಪೂರ್ಣ ಬೆಂಬಲ ನೀಡಲಾಗುವುದು. ಆದರೆ ದೇಶದಾದ್ಯಂತ ದೇಣಿಗೆಸಂಗ್ರಹಿಸಿ, ಯಾರಿಗೋ ಅನುಕೂಲ ಮಾಡಿಕೊಡಲು ಅರ್ಧ ಗಂಟೆ ಯಲ್ಲಿ ಎರಡು ಬಾರಿ ಒಪ್ಪಂದರದ್ದು ಮಾಡಿ, ಮತ್ತೆ ₹18 ಕೋಟಿಗೆ ಜಮೀನು ಖರೀದಿ ಮಾಡಿರುವುದರಿಂದ ಭ್ರಷ್ಟಾಚಾರದ ವಾಸನೆ ಕಂಡುಬರುತ್ತಿದೆ.ಶ್ರೀರಾಮ ಯಾವತ್ತು ಒಳ್ಳೆಯದು ಮಾಡುವುದಿಲ್ಲ. ರಾಮನ ಹೆಸರಲ್ಲಿ ಅಧಿಕಾರಕ್ಕೆಬಂದಿರಬಹುದು. ಅದೇ ರಾಮ ಇವರನ್ನು ಬಲಿ ತೆಗೆದುಕೊಳ್ಳುತ್ತಾನೆ ಎಂದುಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಕಾಲದಲ್ಲೂ ಬಿಜೆಪಿಗೆ ಅಧಿಕಾರದ ಚಿಂತೆಯಾಗಿದೆ. ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಪಕ್ಷದಲ್ಲಿ ನಾಯಕತ್ವ ಗೊಂದಲ ಹಾಗೂ ಸಿ.ಎಂ ಸ್ಥಾನದ ಕಿತ್ತಾಟದಸಮಸ್ಯೆ ಬಗೆಹರಿಸಲು ಬಂದಿದ್ದಾರೆ. ಬಿಜೆಪಿ ನಾಯಕರ ಕಿತ್ತಾಟದ ವಿಚಾರ ಬೇಕಿಲ್ಲ. ಜನರ ಜೀವಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT