<p><strong>ಹೊಳೆನರಸೀಪುರ:</strong> ಯುಗಾದಿ ಹಬ್ಬದ ದಿನವಾದ ಭಾನುವಾರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂದೆ ಹನುಮಂತೋತ್ಸವ, ಕಡ್ಲೆಕಾಯಿ ಪರಸೆ ಹಾಗೂ ಹೊನ್ನಿನ ಕುಡಿಕೆ ಹೊಡೆಯುವ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು.</p>.<p>ಯುಗಾದಿ ಅಂಗವಾಗಿ ಲಕ್ಷ್ಮೀನರಸಿಂಹಸ್ವಾಮಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜೆ ವಿಧಿ ವಿಧಾನಗಳನ್ನು ನಡೆಸಲಾಯಿತು. ಉತ್ತಾರಾಧಿಮಠದವರು ನೀಡಿರುವ ವಿಶೇಷ ವಜ್ರ ಅಭರಣಗಳಿಂದ ಅಲಂಕರಿಸಿ ನಿತ್ಯಾರಾಧನೆ, ಬಲಿಪ್ರಧಾನಪೂಜೆ, ಕೃಷ್ಣಗಂಧೋತ್ಸವ ನಡೆಸಿದ ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ತೀರ್ಥಪ್ರಸಾದ ನೀಡಿದರು.</p>.<p>ಗೋಧೂಳಿ ಲಗ್ನದಲ್ಲಿ ನಡೆಯುವ ಹನುಮಂತೋತ್ಸವ ಪ್ರಯುಕ್ತ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ್ದ ಲಕ್ಷ್ಮೀನರಸಿಂಹನ ಉತ್ಸವ ಮೂರ್ತಿಗಳನ್ನು ರಥಬೀದಿಯಲ್ಲಿ ಉತ್ಸವ ನಡೆಸಿ ಪೂಜಿಸಲಾಯಿತು.</p>.<p>ನಂತರ ಕಡ್ಲೆಕಾಯಿಯನ್ನು ದೇವರ ಮೂರ್ತಿಯ ಮೇಲೆ ಎರಚುತ್ತಾ ಸ್ವಾಮಿಯ ಅಡ್ಡೆಯನ್ನು ಹೊತ್ತು ನೂರಾರು ಭಕ್ತರು ಹನುಮಂತನ ಉತ್ಸವವನ್ನು ರಥಬೀದಿಯಲ್ಲಿ ಸಾಗಿದರು. ಉತ್ಸವದಲ್ಲಿ ಭಾಗಿಯಾಗಿದ್ದ ಭಕ್ತರು ಹನುಮಂತ ಮೇಲೆ ಎಸೆದ ಕಡ್ಲೆಕಾಯಿಯನ್ನು ಆಯ್ದುಕೊಂಡು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರು.</p>.<p>ಇದೇ ಸಂದರ್ಭದಲ್ಲಿ ಹನುಮೋತ್ಸವಕ್ಕೆ ಮುನ್ನ ಆಂಜನೇಯ ದೇವಾಲಯದ ಮುಂದೆ ಮೇಲಕ್ಕೆ ಕಟ್ಟಲಾಗಿದ್ದ ಹೊನ್ನಿನ ಮಡಕೆ ಹೊಡೆದು ಅದರಲ್ಲಿನ ಹಣವನ್ನು ತಮ್ಮದಾಗಿಸಿಕೊಳ್ಳಲು ಯುವಕರ ಗುಂಪುಗಳು ಪ್ರಯತ್ನಪಟ್ಟು ಯಶಸ್ವಿಯಾದರು.</p>.<p>ಎಸ್ಎಲ್ಎನ್ಸಿ ಸಂಘದ ಯುವಕರು ಹನುಮಂತೋತ್ಸವ ಆಚರಿಸಿಕೊಂಡು ಬರುತ್ತಿದ್ದು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಸೇರಿದಂತೆ ಸಾವಿರಾರು ಭಕ್ತರು ಭಾಗಿಗಳಾಗಿ ಸಂಭ್ರಮಿಸಿದರು.</p>.<p>ಯುಗಾದಿ ಅಂಗವಾಗಿ ಅಯ್ಯಪ್ಪಸ್ವಾಮಿ, ಲಕ್ಷ್ಮಣೇಶ್ವರ, ಯಲ್ಲಮ್ಮ, ಕನ್ನಿಕಾಪರಮೇಶ್ವರಿ, ಚೌಡೇಶ್ವರಿ ದೇವಾಲಯ ಹಾಗೂ ರಾಘವೇಂದ್ರ ಮಠಗಳಲ್ಲಿ ವಿಶೇಷ ಪೂಜೆಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ:</strong> ಯುಗಾದಿ ಹಬ್ಬದ ದಿನವಾದ ಭಾನುವಾರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂದೆ ಹನುಮಂತೋತ್ಸವ, ಕಡ್ಲೆಕಾಯಿ ಪರಸೆ ಹಾಗೂ ಹೊನ್ನಿನ ಕುಡಿಕೆ ಹೊಡೆಯುವ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು.</p>.<p>ಯುಗಾದಿ ಅಂಗವಾಗಿ ಲಕ್ಷ್ಮೀನರಸಿಂಹಸ್ವಾಮಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜೆ ವಿಧಿ ವಿಧಾನಗಳನ್ನು ನಡೆಸಲಾಯಿತು. ಉತ್ತಾರಾಧಿಮಠದವರು ನೀಡಿರುವ ವಿಶೇಷ ವಜ್ರ ಅಭರಣಗಳಿಂದ ಅಲಂಕರಿಸಿ ನಿತ್ಯಾರಾಧನೆ, ಬಲಿಪ್ರಧಾನಪೂಜೆ, ಕೃಷ್ಣಗಂಧೋತ್ಸವ ನಡೆಸಿದ ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ತೀರ್ಥಪ್ರಸಾದ ನೀಡಿದರು.</p>.<p>ಗೋಧೂಳಿ ಲಗ್ನದಲ್ಲಿ ನಡೆಯುವ ಹನುಮಂತೋತ್ಸವ ಪ್ರಯುಕ್ತ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ್ದ ಲಕ್ಷ್ಮೀನರಸಿಂಹನ ಉತ್ಸವ ಮೂರ್ತಿಗಳನ್ನು ರಥಬೀದಿಯಲ್ಲಿ ಉತ್ಸವ ನಡೆಸಿ ಪೂಜಿಸಲಾಯಿತು.</p>.<p>ನಂತರ ಕಡ್ಲೆಕಾಯಿಯನ್ನು ದೇವರ ಮೂರ್ತಿಯ ಮೇಲೆ ಎರಚುತ್ತಾ ಸ್ವಾಮಿಯ ಅಡ್ಡೆಯನ್ನು ಹೊತ್ತು ನೂರಾರು ಭಕ್ತರು ಹನುಮಂತನ ಉತ್ಸವವನ್ನು ರಥಬೀದಿಯಲ್ಲಿ ಸಾಗಿದರು. ಉತ್ಸವದಲ್ಲಿ ಭಾಗಿಯಾಗಿದ್ದ ಭಕ್ತರು ಹನುಮಂತ ಮೇಲೆ ಎಸೆದ ಕಡ್ಲೆಕಾಯಿಯನ್ನು ಆಯ್ದುಕೊಂಡು ಪ್ರಸಾದದ ರೂಪದಲ್ಲಿ ಸ್ವೀಕರಿಸಿದರು.</p>.<p>ಇದೇ ಸಂದರ್ಭದಲ್ಲಿ ಹನುಮೋತ್ಸವಕ್ಕೆ ಮುನ್ನ ಆಂಜನೇಯ ದೇವಾಲಯದ ಮುಂದೆ ಮೇಲಕ್ಕೆ ಕಟ್ಟಲಾಗಿದ್ದ ಹೊನ್ನಿನ ಮಡಕೆ ಹೊಡೆದು ಅದರಲ್ಲಿನ ಹಣವನ್ನು ತಮ್ಮದಾಗಿಸಿಕೊಳ್ಳಲು ಯುವಕರ ಗುಂಪುಗಳು ಪ್ರಯತ್ನಪಟ್ಟು ಯಶಸ್ವಿಯಾದರು.</p>.<p>ಎಸ್ಎಲ್ಎನ್ಸಿ ಸಂಘದ ಯುವಕರು ಹನುಮಂತೋತ್ಸವ ಆಚರಿಸಿಕೊಂಡು ಬರುತ್ತಿದ್ದು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಸೇರಿದಂತೆ ಸಾವಿರಾರು ಭಕ್ತರು ಭಾಗಿಗಳಾಗಿ ಸಂಭ್ರಮಿಸಿದರು.</p>.<p>ಯುಗಾದಿ ಅಂಗವಾಗಿ ಅಯ್ಯಪ್ಪಸ್ವಾಮಿ, ಲಕ್ಷ್ಮಣೇಶ್ವರ, ಯಲ್ಲಮ್ಮ, ಕನ್ನಿಕಾಪರಮೇಶ್ವರಿ, ಚೌಡೇಶ್ವರಿ ದೇವಾಲಯ ಹಾಗೂ ರಾಘವೇಂದ್ರ ಮಠಗಳಲ್ಲಿ ವಿಶೇಷ ಪೂಜೆಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>