ಬೆಳಗ್ಗೆ 8.20ರ ಸಮಯದಲ್ಲಿ ಎಂದಿನಂತೆ ತಾಯಿ,ಮಗ ಜಾನುವಾರುಗಳೊಂದಿಗೆ ಜಮೀನು ಬಳಿಗೆ ತೆರಳುತ್ತಿದ್ದರು. ಈ ವೇಳೆ ದಾಳಿ ಮಾಡಿದ ಚಿರತೆ ಇಬ್ಬರನ್ನೂ ಗಂಭೀರವಾಗಿ ಗಾಯಗೊಳಿಸಿದೆ.ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅರವಳಿಕೆ ವೈದ್ಯರು ಮುಂದಾದರು. ಈ ವೇಳೆ ಅರವಳಿಕೆ ಎಂಜೆಕ್ಷನ್ ನೀಡಿದ ನಂತರ ಡಾ.ಮುರುಳಿ ಹಾಗೂ ಮತ್ತೊಬ್ಬರ ಮೇಲೆ ಚಿರತೆ ಎರಗಿತ್ತು. ಮುರುಳಿ ಕೈಗಳಿಗೆ ಗಾಯವಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡ ಚಿರತೆ ಮಧ್ಯಾಹ್ನ ಬೆಂಡೆಕೆರೆ ಗ್ರಾಮದ ತಾಂಡ್ಯ ಬಳಿ ಪ್ರತ್ಯಕ್ಷವಾಗುತ್ತಿದ್ದಂತೆ ಗ್ರಾಮಸ್ಥರು ದೊಣ್ಣೆ, ಕಲ್ಲುಗಳಿಂದ ಹೊಡೆದು ಕೊಂದಿದ್ದಾರೆ.