ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಬೆಟ್ಟ–ಗುಡ್ಡಗಳ ಸಾಲು: ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಪಶ್ಚಿಮ ಘಟ್ಟ

ಸಂತೋಷ್‌ ಸಿ.ಬಿ.
Published : 15 ಜುಲೈ 2024, 7:49 IST
Last Updated : 15 ಜುಲೈ 2024, 7:49 IST
ಫಾಲೋ ಮಾಡಿ
Comments
ಸಕಲೇಶಪುರ ತಾಲ್ಲೂಕಿನ ಮಂಜರಾಬಾದ್‌ ಕೋಟೆಗೆ ಭೇಟಿ ನೀಡಿರುವ ಪ್ರವಾಸಿಗರು.
ಸಕಲೇಶಪುರ ತಾಲ್ಲೂಕಿನ ಮಂಜರಾಬಾದ್‌ ಕೋಟೆಗೆ ಭೇಟಿ ನೀಡಿರುವ ಪ್ರವಾಸಿಗರು.
ಪಶ್ಚಿಮ ಘಟ್ಟದ ಬೆಟ್ಟದ ಸಾಲುಗಳ ಮೇಲೆ ಮಂಜು ಆವರಿಸಿರುವುದು.
ಪಶ್ಚಿಮ ಘಟ್ಟದ ಬೆಟ್ಟದ ಸಾಲುಗಳ ಮೇಲೆ ಮಂಜು ಆವರಿಸಿರುವುದು.
ಬಿಸಿಲೆ ಘಾಟಿನಲ್ಲಿ ಧುಮುಕುತ್ತಿರುವ ಜಲಪಾತಗಳನ್ನು ಸೊಬಗನ್ನು ಸವಿಯುತ್ತಿರುವ ಪ್ರವಾಸಿಗರು.
ಬಿಸಿಲೆ ಘಾಟಿನಲ್ಲಿ ಧುಮುಕುತ್ತಿರುವ ಜಲಪಾತಗಳನ್ನು ಸೊಬಗನ್ನು ಸವಿಯುತ್ತಿರುವ ಪ್ರವಾಸಿಗರು.
ನಕ್ಷತ್ರಾಕಾರದ ಮಂಜರಾಬಾದ್‌ ಕೋಟೆ.
ನಕ್ಷತ್ರಾಕಾರದ ಮಂಜರಾಬಾದ್‌ ಕೋಟೆ.
ಕಣ್ಮನ ಸೆಳೆಯುತ್ತಿವೆ ಸಣ್ಣ ಜಲಪಾತಗಳು ಬಸ್‌‌ಗಳಲ್ಲಿ ಕುಳಿತು ಸೌಂದರ್ಯ ಸವಿಯುವ ಪ್ರಯಾಣಿಕರು ಜಿಲ್ಲೆಯ ದಾರಿಯುದ್ದಕ್ಕೂ ಕಣ್ಮನ ಸೆಳೆಯುವ ದೃಶ್ಯ
ಮಂಜರಾಬಾದ್ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸ್ವಲ್ಪ ಕಾಲ ಕಳೆದು ಮುಂದಿನ ಹಾದಿ ಹಿಡಿಯುತ್ತೇವೆ. ಬಿಸಿ ಬಜ್ಜಿ ಟೀ– ಕಾಫಿ ಸವಿಯುವುದನ್ನು ಮರೆಯುವುದಿಲ್ಲ.
ಅರುಣ್ ಕುಮಾರ್ ಬೆಂಗಳೂರಿನ ಉದ್ಯಮಿ
ಗುಡ್ಡ ಕುಸಿಯುವ ಸ್ಥಳಗಳಲ್ಲಿ ಜಾಗೃತಿ ಅವಶ್ಯ. ನಿರ್ದಿಷ್ಟ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವ ಹುಚ್ಚಾಟ ತಡೆಯುವ ನಿಟ್ಟಿನಲ್ಲಿ ಪೊಲೀಸರ ಗಸ್ತು ಹೆಚ್ಚಿಸಬೇಕು.
ಸಂಕೇತ್ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ
ವಾರಾಂತ್ಯದಲ್ಲಿ ಹೆಚ್ಚಿದ ದಟ್ಟಣೆ
ವಾರಾಂತ್ಯ ರಜೆಗಳಲ್ಲಂತೂ ಈ ರಸ್ತೆಯ ಇಕ್ಕೆಲಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚು. ಧರ್ಮಸ್ಥಳ ಸುಬ್ರಹ್ಮಣ್ಯ ಸೇರಿದಂತೆ ಇತರೆ ಪ್ರವಾಸಿ ಸ್ಥಳಗಳಿಗೆ ಈ ರಸ್ತೆ ಮೂಲಕವೇ ಸಂಚರಿಸುತ್ತಾರೆ. ಪ್ರಕೃತಿ ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ. ಮಳೆಗಾಲ ಆರಂಭವಾಯಿತೆಂದರೆ ಹಾಸನ– ಮಂಗಳೂರು ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ಹೆಚ್ಚುತ್ತದೆ. ವಾರಾಂತ್ಯಗಳಲ್ಲಂತೂ ಕೆಲವೆಡೆ ಸಂಚಾರ ದಟ್ಟಣೆಯೂ ಆಗುತ್ತದೆ. ಜಲಪಾತಗಳನ್ನು ಕಣ್ಣಿಗೆ ಕಂಡೊಡನೆ ವಾಹನಗಳನ್ನು ನಿಲ್ಲಿಸುವ ಮಂದಿ ಘಾಟಿಯ ತಡೆಗೋಡೆಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹಾಗೂ ಗ್ರೂಪ್ ಫೋಟೋ ತೆಗೆಯುವ ಸನ್ನಿವೇಶಗಳು ಸಾಮಾನ್ಯ. ‌ಹೆದ್ದಾರಿ ಗಸ್ತು ವಾಹನದ ಪೊಲೀಸರು ಹೆಚ್ಚು ನಿಗಾ ವಹಿಸುತ್ತಿದ್ದು ಅನಾಹುತ ತಪ್ಪಿಸುವಲ್ಲಿ ನಿರತರಾಗಿದ್ದಾರೆ. ಎಷ್ಟೋ ಬಾರಿ ರಸ್ತೆ ಮಧ್ಯ ಮರ ಬೀಳುವುದು ಗುಡ್ಡ ಕುಸಿಯುವ ಸನ್ನಿವೇಶಗಳು ಗೋಚರಿಸುತ್ತಿದ್ದು ವಿಪರೀತ ಮಳೆಯ ಸಂದರ್ಭದಲ್ಲಿ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಈ ಬಗ್ಗೆ ಗಮನ ನೀಡಬೇಕು ಎನ್ನುವ ಒತ್ತಾಯ ಪ್ರವಾಸಿಗರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT