ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನಿಗೆ ರಸ್ತೆ: ಗ್ರಾಮಸ್ಥರು-ಯಶ್ ಬೆಂಬಲಿಗರ ನಡುವೆ ಗಲಾಟೆ

Last Updated 9 ಮಾರ್ಚ್ 2021, 6:26 IST
ಅಕ್ಷರ ಗಾತ್ರ

ಹಾಸನ: ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರದಲ್ಲಿ ಚಿತ್ರ ನಟ ಯಶ್ ತಂದೆ, ತಾಯಿ ಹಾಗೂ ತಿಮ್ಮೇನಹಳ್ಳಿ ಗ್ರಾಮಸ್ಥರ ನಡುವೆ‌ ಮಂಗಳವಾರ ಗಲಾಟೆ ನಡೆದಿದೆ.

ದುದ್ದ ಹೋಬಳಿಯ ತಿಮ್ಮೇನಹಳ್ಳಿ ಗ್ರಾಮದ ಬಳಿ ಖರೀದಿಸಿರುವ ಜಮೀನಿಗೆ ಓಡಾಡುವ ಕಾಲು ದಾರಿ‌ ಜಾಗಕ್ಕಾಗಿ ಯಶ್ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ ಜೆಸಿಬಿಯೊಂದಿಗೆ ಸ್ಥಳಕ್ಕೆ ಬಂದಿದ್ದಾರೆ.

ಕೆಲಸ ಮಾಡುವ ವೇಳೆ ಬಂದ ಗ್ರಾಮಸ್ಥರು ಅಡ್ಡಿ ಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ಹಾಗೂ ಯಶ್ ಬೆಂಬಲಿಗರು ಕೈ ಕೈ ಮಿಲಾಯಿಸಿದರು. ದುದ್ದ ಪೊಲೀಸರ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT