ಮಠದ ಪೀಠಾಧಿಪತಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನಾನು ನಿನ್ನೆ ಕೊಟ್ಟೂರಿಗೆ ಹೋಗಿದ್ದೆ. ರೇಣುಕರ ಮೂರ್ತಿ ಮತ್ತು ಸ್ಫಟಿಕ ಲಿಂಗವನ್ನು ನಿತ್ಯ ಪೂಜೆ ಮಾಡುತ್ತಿದ್ದೆ. ದಕ್ಷಿಣ ಭಾರತದಲ್ಲಿಯೇ ಬೃಹತ್ ಸ್ಫಟಿಕ ಲಿಂಗ ಇದಾಗಿತ್ತು. ಮಠದ ಆವರಣದಲ್ಲಿನ ಸಿಸಿಟಿವಿ ಕ್ಯಾಮೆರಾ ಬಂದ್ ಮಾಡಿ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ಮಠಕ್ಕೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂತು’ ಎಂದು ತಿಳಿಸಿದ್ದಾರೆ.