ಹಾವೇರಿ: ‘ಮುಖ್ಯಮಂತ್ರಿಯಾಗಿ ನನ್ನ ಒಂದು ತಿಂಗಳ ಆಡಳಿತದ ಬಗ್ಗೆ ನೀವು ಚರ್ಚೆ ಮಾಡಿ. ನಾನು ಸಾಗುವ ಹಾದಿ ದೊಡ್ಡದಿದೆ. ಜನರ ಆಶೀರ್ವಾದವೇ ನನಗೆ ದೊಡ್ಡ ಶಕ್ತಿ. ಅಲ್ಪ ಸಮಯದಲ್ಲಿ ಕನ್ನಡಿಗರು, ಬಡವರು, ಶೋಷಿತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆ ತರುವ ವಿಶ್ವಾಸ ಹೊಂದಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.