<p><strong>ತಡಸ(ಕುನ್ನೂರ):</strong> ಶಿಗ್ಗಾಂವ ತಾಲೂಕಿನ ಕುನ್ನೂರ ಗ್ರಾಮದ ಮೌಲಾನಾ ಆಜಾದ್ ಮಾದರಿ (ಇಂಗ್ಲಿಷ ಮಾದ್ಯಮ) ಶಾಲೆಗೆ 6ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಸಂಚರಿಸುವುದಕ್ಕೆ ಸೋಮವಾರ ಬಸ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.</p>.<p>ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇಶಪ್ಪ ಹರಿಜನ ದೊಡ್ಡಮನಿ ಮಾತನಾಡಿ, ಸರ್ಕಾರಿ ಪ್ರೌಢಶಾಲೆ ಕುನ್ನೂರ ಆವರಣದಲ್ಲಿದ್ದು, ನೂತನ ಕಟ್ಟಡವಾದ ಕುನ್ನೂರ ಪ್ಲಾಟ್ ಮಮದಾಪೂರ ರೋಡ್ ಕುನ್ನೂರ ಶಾಲೆಯಲ್ಲಿ 300ರಿಂದ 350ಕ್ಕೂ ಹೆಚ್ಚು ಮಕ್ಕಳು ಸುತ್ತಮುತ್ತ ಹಳ್ಳಿಗಳಿಂದ ಬರುತ್ತಾರೆ. ಈ ಬಸ್ ವ್ಯವಸ್ಥೆಯಿಂದಾಗಿ ತಡಸ, ಹೊಸೂರ, ದುಂಡಸಿ, ಅಡವಿಸೋಮಾಪೂರ ಮತ್ತು ತೋರುರ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.</p>.<p>ಮೆಹಬೂಬ್ ಅಗಡಿ ಮಾತನಾಡಿ, ಮಳೆಗಾಲದಲ್ಲಿ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು ಮಕ್ಕಳ ಹಿತದೃಷ್ಟಿಯಿಂದ ಈ ಮಾರ್ಗವಾಗಿ ಶಿಗ್ಗಾಂವ ಕುನ್ನುರ ಮಮದಾಪೂರ ಕುನ್ನೂರ ತಡಸ, ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭವಾಗಿದ್ದು ತಾಲೂಕಿನ ಗಡಿ ಗ್ರಾಮಕ್ಕೆ ಅನುಕೂಲವಾಗಿದೆ ಎಂದರು.<br><br>ಬಸ್ ಗ್ರಾಮಸ್ಥರು ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಸನ್ಮಾನಿಸಿ ಗೌರವಿಸಿದರು. ಬಸ್ ಶೃಂಗರಿಸಿ ತೋರಣ ಕಟ್ಟಿದರು.</p>.<p>ಗ್ರಾಮದ ಅಬ್ದುಲ್ ರಜಾಕ್ ಬಡಿಗೇರ, ಸುಭಾಷ ಜಾದವ್, ಪಂಚಾಕ್ಷರಿ ಹಿರೇಮಠ, ಬಸವರಾಜ ಅಕ್ಕಿ, ತಿಪ್ಪಣ್ಣ ಸುಣಗಾರ, ಸೋಮಯ್ಯ ಹಿರೇಮಠ, ಬ್ರಹ್ಮಾನಂದ ಕಮ್ಮಾರ್, ರಮೇಶ ಅಕ್ಕಿ ಹಾಗೂ ಶಾಲಾ ಮಕ್ಕಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಡಸ(ಕುನ್ನೂರ):</strong> ಶಿಗ್ಗಾಂವ ತಾಲೂಕಿನ ಕುನ್ನೂರ ಗ್ರಾಮದ ಮೌಲಾನಾ ಆಜಾದ್ ಮಾದರಿ (ಇಂಗ್ಲಿಷ ಮಾದ್ಯಮ) ಶಾಲೆಗೆ 6ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಸಂಚರಿಸುವುದಕ್ಕೆ ಸೋಮವಾರ ಬಸ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.</p>.<p>ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇಶಪ್ಪ ಹರಿಜನ ದೊಡ್ಡಮನಿ ಮಾತನಾಡಿ, ಸರ್ಕಾರಿ ಪ್ರೌಢಶಾಲೆ ಕುನ್ನೂರ ಆವರಣದಲ್ಲಿದ್ದು, ನೂತನ ಕಟ್ಟಡವಾದ ಕುನ್ನೂರ ಪ್ಲಾಟ್ ಮಮದಾಪೂರ ರೋಡ್ ಕುನ್ನೂರ ಶಾಲೆಯಲ್ಲಿ 300ರಿಂದ 350ಕ್ಕೂ ಹೆಚ್ಚು ಮಕ್ಕಳು ಸುತ್ತಮುತ್ತ ಹಳ್ಳಿಗಳಿಂದ ಬರುತ್ತಾರೆ. ಈ ಬಸ್ ವ್ಯವಸ್ಥೆಯಿಂದಾಗಿ ತಡಸ, ಹೊಸೂರ, ದುಂಡಸಿ, ಅಡವಿಸೋಮಾಪೂರ ಮತ್ತು ತೋರುರ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.</p>.<p>ಮೆಹಬೂಬ್ ಅಗಡಿ ಮಾತನಾಡಿ, ಮಳೆಗಾಲದಲ್ಲಿ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು ಮಕ್ಕಳ ಹಿತದೃಷ್ಟಿಯಿಂದ ಈ ಮಾರ್ಗವಾಗಿ ಶಿಗ್ಗಾಂವ ಕುನ್ನುರ ಮಮದಾಪೂರ ಕುನ್ನೂರ ತಡಸ, ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭವಾಗಿದ್ದು ತಾಲೂಕಿನ ಗಡಿ ಗ್ರಾಮಕ್ಕೆ ಅನುಕೂಲವಾಗಿದೆ ಎಂದರು.<br><br>ಬಸ್ ಗ್ರಾಮಸ್ಥರು ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಸನ್ಮಾನಿಸಿ ಗೌರವಿಸಿದರು. ಬಸ್ ಶೃಂಗರಿಸಿ ತೋರಣ ಕಟ್ಟಿದರು.</p>.<p>ಗ್ರಾಮದ ಅಬ್ದುಲ್ ರಜಾಕ್ ಬಡಿಗೇರ, ಸುಭಾಷ ಜಾದವ್, ಪಂಚಾಕ್ಷರಿ ಹಿರೇಮಠ, ಬಸವರಾಜ ಅಕ್ಕಿ, ತಿಪ್ಪಣ್ಣ ಸುಣಗಾರ, ಸೋಮಯ್ಯ ಹಿರೇಮಠ, ಬ್ರಹ್ಮಾನಂದ ಕಮ್ಮಾರ್, ರಮೇಶ ಅಕ್ಕಿ ಹಾಗೂ ಶಾಲಾ ಮಕ್ಕಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>